May 20, 2024

Bhavana Tv

Its Your Channel

ಚಿನ್ನದ ಚಮಚದಲ್ಲಿ ತಿಂದು ಬೆಳೆದಿಲ್ಲಾ, ತಾಳೆ ಹಿಟ್ಟಿನ ಗಂಜಿ ಕುಡಿದು ಬೆಳೆದವನು :- ಈಶ್ವರ ನಾಯ್ಕ.

ಭಟ್ಕಳ :– ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘದ ವತಿಯಿಂದ 166ನೇ ಜಯಂತ್ಯುತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಮಾಡಿದ ಶ್ರೇಷ್ಠ ಸಾಧನೆಗಾಗಿ ರಾಜ್ಯ ಮಟ್ಟದ ‘ಪರಿವರ್ತನ ಶ್ರೀ’ ಪ್ರಶಸ್ತಿಯನ್ನು ರಾಜ್ಯ ಕಾಸ್ಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ಎನ್ ನಾಯ್ಕ ಮುರ್ಡೇಶ್ವರ ಇವರಿಗೆ ಸೋಮವಾರದಂದು ಇಲ್ಲಿನ ಆಸರಕೇರಿ ಶ್ರೀ ನಿಶ್ಚಲಮಕ್ಕಿ ಸಭಾಭವನದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ನಾನು ಚಿಕ್ಕವನಿಂದ ತೀರ ಬಡಕುಟಂಬದಿಂದ ಕಷ್ಟ ಪಟ್ಟು ಮೇಲೆ ಬಂದವನು, .ಚಿನ್ನದ ಚಮಚದಲ್ಲಿ ಊಟ ಮಾಡದೆ ತಾಳೆ ಹಿಟ್ಟಿನ ಗಂಜಿ ಕುಡಿದು ದೊಡ್ಡವನಾಗಿದ್ದೇನೆ. 7 ನೆ ತರಗತಿ ಅಭ್ಯಾಸ ಮಾಡುವಾಗ ಆರ್.ಎನ್.ಶೆಟ್ಟಿಯವವರ ಕಾರ್ಖಾನೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 4 ರೂಪಾಯಿಗೆ ಸಂಬಳಕ್ಕೆ ದುಡಿದು ಪುಸ್ತಕ ಖರೀದಿ ಮಾಡಿ ವಿದ್ಯಾಭ್ಯಾಸ ಪಡೆದುಕೊಂಡಿದ್ದೇನೆ.
ನಮ್ಮಿಂದ ಸಾಕಷ್ಟು ಕೆಲಸ ಕಾರ್ಯವಾದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ನಾವು ಒಂದು ಕೈಯಲ್ಲಿ ಸಹಾಯ ಮಾಡಿದರೆ ಇನ್ನೊಂದು ಕೈಗೆ ಗೊತ್ತಾಗ ಬಾರದು ನಾನು ಮಾಡಿದ ಸಹಾಯದಲ್ಲಿ ಅತ್ಯಂತ ಖುಷಿ ತಂದಿರುವ ಕೆಲಸ ಸರ್ಕಾರಿ ಆಸ್ಪತ್ರೆಗೆ ಡಯಾಲಿಸಸ್ ಯಂತ್ರ ನೀಡಿದ್ದು.
2013 ರಲ್ಲಿ ನಮ್ಮ ತಾಲೂಕಿನ ಡಯಾಲಿಸಸ್ ರೋಗಿಗಳು ಕುಂದಾಪುರ ಉಡುಪಿ ಜಿಲ್ಲೆಗೆ ಹೋಗ ಬೇಕಾಗಿತ್ತು ನಾನು ಆ ಸಮಯದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿರುವಾಗ ಈ ಕೆಲಸ ಮಾಡಿರುವುದು ನನಗೆ ಅಂತ್ಯಂತ ಸಂತೋಷ ತಂದಿರುವ ಕ್ಷಣವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಶೈಲೇಶ್ ವೈದ್ಯ

error: