ಕುಮಟಾ: ಪಕ್ಷದಿಂದ ಪ್ರತಿ ನಗರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ಕೊಡಿಸಿ ಅಗತ್ಯ ಆರೋಗ್ಯ ಕಿಟ್ಗಳನ್ನು ವಿತರಿಸಲಾಗುತ್ತಿದೆ. ರಾಜ್ಯಾದ್ಯಂತ ಈಗಾಗಲೇ ೮೫೦೦ ಕಿಟ್ಗಳನ್ನು ವಿತರಿಸಲಾಗಿದೆ. ಜನರಲ್ಲಿ ಕರೊನಾ ಕುರಿತ ಭಯಮುಕ್ತ ವಾತಾವರಣ ನಿರ್ಮಿಸುವುದು ಹಾಗೂ ಜಾಗೃತಿ ಮೂಡಿಸುವುದೇ ಕಾಂಗ್ರೆಸ್ನ ಆರೋಗ್ಯ ಹಸ್ತ ಕಾರ್ಯಕ್ರಮದ ಗುರಿಎಂದು ಕಾಂಗ್ರೆಸ್ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷ ಧ್ರುವನಾರಾಯಣ್ ತಿಳಿಸಿದರು.
ಕೆನರಾ ಲೋಕಸಭಾ ಕ್ಷೇತ್ರದಿಂದ ೭ ಬಾರಿ ಆಯ್ಕೆಯಾಗಿರುವ ಸಂಸದ ಅನಂತಕುಮಾರ ಹೆಗಡೆಯವರ ಕ್ಷೇತ್ರದ ಅಭಿವೃದ್ಧಿಗೆ ಈವರೆಗಿನ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದ ಧ್ರುವನಾರಾಯಣ್, ಚುನಾವಣೆಯಲ್ಲಿ ಮೋದಿಯವರ ಮುಖ ತೋರಿಸಿ ಗೆಲುವು ಸಾಽಸಿದ ಫೇಸ್ಲೆಸ್ ಪೀಸ್ ಎಂದು ಟೀಕಿಸಿದರು. ಕರೊನಾ ಸಂಕಟ ಕಾಲದಲ್ಲಿ ರಾಜ್ಯಕ್ಕೆ ಅಗತ್ಯ ನೆರವನ್ನು ತರಬಹುದಿತ್ತು. ಆದರೆ ಎಲ್ಲಿಯಾದರೂ ಸಣ್ಣ ಕೋಮು ಸಂಘರ್ಷಗಳಾದರೆ ವಿಪರೀತದ ಹೇಳಿಕೆ ಕೊಡುತ್ತಾರೆ. ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಶೂನ್ಯಸಾಧಕರು ಎಂದರು.
ಮಾಜಿ ಸಚಿವ ಅಜಯ್ಕುಮಾರ ಸರ್ನಾಯಕ್, ಸದಾನಂದ ಡಂಗಣ್ಣನವರ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಬ್ಲಾಕ್ ಅಧ್ಯಕ್ಷ ವಿ.ಎಲ್.ನಾಯ್ಕ, ರವಿಕುಮಾರ ಶೆಟ್ಟಿ, ಹೊನ್ನಪ್ಪ ನಾಯಕ ಇನ್ನಿತರರು ಇದ್ದರು.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ