May 20, 2024

Bhavana Tv

Its Your Channel

ರಾಜ್ಯ ಕಾರ್ಮಿಕ ವಿಮಾ ನಿಗಮದ ಉತ್ತಮ ದರ್ಜೆಯ ನೂತನ ಆಸ್ಪತ್ರೆಯನ್ನು ಕುಮಟಾ ಪಟ್ಟಣದಲ್ಲೇ ನಿರ್ಮಿಸುವಂತೆ ಒತ್ತಾಯ

ಕುಮಟಾ : ತಾಲೂಕಿನ ಗಣ್ಯರು ಕೇಂದ್ರ ಸರ್ಕಾರದ ಕಾರ್ಮಿಕ ಅಧಿಕಾರಿ ಗುರುವಿಂದರ ಸಿಂಗ್ ಅವರಿಗೆ ಮಂಗಳವಾರ ವಿನಂತಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಮಾತನಾಡಿ, ರಾಜ್ಯ ಕಾರ್ಮಿಕ ವಿಮಾ ನಿಗಮದ ಉತ್ತಮ ದರ್ಜೆಯ ನೂತನ ಆಸ್ಪತ್ರೆ ಹಾಗೂ ಮುಖ್ಯ ಕಚೇರಿಯನ್ನು ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲೇ ನಿಮಿರ್ಸಿ, ಇಲ್ಲಿನ ಬಡ ಕೂಲಿ ಕಾರ್ಮಿಕರಿಗೆ ನೆರವಾಗುವಂತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರರ ಬಳಿ ಈ ಹಿಂದೆ ಮನವಿ ಮಾಡಿಕೊಂಡಿದ್ದೆವು. ಅದರಂತೆ ಮುಖ್ಯಮಂತ್ರಿಯವರಿAದಲೂ ಪ್ರಸ್ತಾವನೆ ಸಲ್ಲಿಸುತ್ತೇವೆ. ಆ ಮೂಲಕ ಇಲ್ಲಿನ ಕಾರ್ಮಿಕರಿಗೆ ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯ ದೊರೆಯುವಂತಾಗಬೇಕು ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಅಧಿಕಾರಿ ಗುರುವಿಂದರ ಸಿಂಗ್ ಅವರ ಬಳಿ ವಿನಂತಿಸಿಕೊAಡರು.

ಕೇAದ್ರ ಸರ್ಕಾರದ ಕಾರ್ಮಿಕ ಅಧಿಕಾರಿ ಗುರುವಿಂದರ ಸಿಂಗ್ ಮಾತನಾಡಿ, ಸರ್ಕಾರದ ಆದೇಶದಂತೆ ನಾವು ಆಸ್ಪತ್ರೆಯನ್ನು ನಿರ್ಮಿಸುತ್ತೇವೆ. ನಿಮ್ಮ ಸಹಕಾರವೂ ಅಗತ್ಯ. ಸೂಕ್ತ ಸ್ಥಳದ ಪರಿಶೀಲನೆ ನಡೆಯುತ್ತಿದ್ದು, ಇಲ್ಲಿನ ಬಡ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ ನೀಡಲು ಸದ್ಯದಲ್ಲೇ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ದೇವಗಿರಿ ಗ್ರಾ.ಪಂ ಮಾಜಿ ಅಧ್ಯಕ್ಷ ಎಸ್.ಟಿ.ನಾಯ್ಕ, ಪ್ರಮುಖರಾದ ಸುಬ್ರಹ್ಮಣ್ಯ ಉಡದಂಗಿ ಸೇರಿದಂತೆ ಇನ್ನಿತರರು ಇದ್ದರು.

error: