ಭಟ್ಕಳ : ತಾಲೂಕಿನಲ್ಲಿ ಕೂಡ ಅಕ್ರಮ ಗಾಂಜಾ ಘಾಟು ಕೇಳಿ ಬರುತ್ತಿದ್ದು, ಜಾಲಿ ಬೀಚ್ ಹತ್ತಿರ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿತರನ್ನು ಬಂಧಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಾಲಿ ಬೀಚ್ ಹತ್ತಿರ ಸೆ. ೧೫ ರಂದು ಸಂಜೆ ಎರಡು ವಾಹನಗಳಲ್ಲಿ ಮಾರಾಟ ಮಾಡುವ ಉದ್ದೇಶದಿಂದ ನಿಂತುಕೊAಡಿದ್ದಾಗಿ ವಿಷಯ ತಿಳಿದು ಬಂದಿದ್ದು ಖಚಿತ ಮಾಹಿತಿ ದೊರೆಯುತ್ತಿದ್ದಂತೆ ಎಸ್.ಪಿ ಶಿವಪ್ರಕಾಶ ದೇವರಾಜ ಹಾಗೂ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಬದ್ರೀನಾಥ್,ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲ್ಲಗುಜ್ಜಿ ಹಾಗೂ ಸಿ.ಪಿ.ಐ. ಪಿ.ಎ ದಿವಾಕರ ಮುಂದಾಳತ್ವದಲ್ಲಿ ಈ ಪ್ರಕರಣವನ್ನು ಭೇದಿಸಿದ್ದಾರೆ.
ಆರೋಪಿಗಳಾದ ಸೈಯದ್ ಅಕ್ರಮ,ಹಳೆ ಬಸ್ಸ ನಿಲ್ದಾಣದ ಹತ್ತಿರ, ಹಾಗೂ ಸೈಯದ್ ಮೂಸಾ ಹನಿಪಾಬಾಧ, ರೂಪೇಶ ಮೊಗೇರ ಜಾಲಿ ದೇವಿ ನಗರ ಮತ್ತು ಹೇಮಂತ ನಾಯ್ಕ ಹೆಬಳೆ ಗಾಂದಿ ನಗರ ನಿವಾಸಿ ಆಗಿದ್ದು, ಇವರನ್ನು ಬಂಧಿಸಲಾಗಿದೆ, ಆರೋಪಿತರಿಗೆ ದಸ್ತಗೀರ ಮಾಡಿ ಆರೋಪಿತರ ಬಳಿಯಲ್ಲಿ ಇದ್ದ ಅಂದಾಜು ೨೫೦ ಗ್ರಾಂ ತೂಕದ ಗಾಂಜಾ, ೦೧ ಬೈಕ್, ೦೨ ಮೊಬೈಲ್ ಫೋನಗಳು-೫೭೦೦/- ರೂಪಾಯಿ ನಗದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆದಿದೆ.
ಈ ಸಂದರ್ಭದಲ್ಲಿ ಕಾರ್ಯಚರಣೆಯಲ್ಲಿ ಭಟ್ಕಳ ಶಹರ ಠಾಣೆಯ ಪಿ.ಎಸ್.ಐ ಶ್ರೀ ಭರತಕುಮಾರ ವಿ, ಪಿ.ಎಸ.ಐ.ಎಚ್.ಬಿ.ಕುಡಗುಂಟಿ, ಸಿಬ್ಬಂದಿಗಳಾದ ಎ.ಎಸ್.ಐ ಗೋಪಾಲ ನಾಯಕ, ದಿನೇಶ ನಾಯಕ, ಮದರಸಾಬ್ ಚಿಕ್ಲರಿ,ಲೋಕೇಶ ಕತ್ತಿ,ಈರಣ್ಣ ಪೂಜಾರಿ, ಸಿದ್ದು ಕಾಂಬಳೆ, ಮಲ್ಲಿಕಾರ್ಜುನ ಇಟಗಿ,ನಾಗರಾಜ್ ಮೊಗೇರ್,ಗೌತಮ ರೊಡ್ಡಣ್ಣ ,ರಾಜು ಗೌಡ, ವಿಶೇಷ ತಂಡದ ಸಿಬ್ಬಂದಿಯವರಾದ ಸಂತೋಷ ಹೊನ್ನಾಳ,ಮೋಹನ್ ಪೂಜಾರಿ,ಚಾಲಕರಾದ ದೇವರಾಜ ಮೊಗೇರ,ಕುಬೇರ ಹೊಸುರ ಭಾಗಿಯಾಗಿದ್ದರು.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ