ಭಟ್ಕಳ: ಕಾರ್ತಿಕ ಮಾಸದ ಮಹಾ ಲಕ್ಷ ದೀಪೋತ್ಸವ ಕಾರ್ಯಕ್ರಮ ಸೋಮವಾರ ಸಂಜೆ ಭಟ್ಕಳ ಕರಿಕಲ್ ಧ್ಯಾನ ಮಂದಿರದಲ್ಲಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿoದ ನೇರವೇರಿತು.ಪರಮಪೂಜ್ಯ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ದೀಪಾರಾಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಅವರು ಮಾತನಾಡಿ ಎಲ್ಲಾ ಕಾರ್ಯಗಳು ಭಗವಂತನ ಅನುಗ್ರಹದಿಂದಲೇ ನಡೆಯುತ್ತದೆ, ಭಗವಂತನ ಅಪ್ಪಣೆಯಿಲ್ಲದೇ ಒಂದು ಹುಲ್ಲು ಕಡ್ಡಿಯೂ ಅಲುಗಾಡಲಾರದು,ತಾನೇ ಮಾಡಿದೆ ಎನ್ನುವುದು ಮೂರ್ಖತನ, ತಮ್ಮಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ ದೀಪವನ್ನು ಹಚ್ಚುವುದರ ಮೂಲಕ ಭಗವಂತನಲ್ಲಿ ಶರಣಾಗುವುದೇ ಈ ದೀಪೋತ್ಸವದ ಮಹತ್ವ ಎಂದರು. ಈ ಸಂದರ್ಭದಲ್ಲಿ ದ್ಯಾನ ಮಂದಿರದಲ್ಲಿ ಕಾರ್ತಿಕ ಮಾಸದಲ್ಲಿ ಭಜನೆ
ಮಾಡಿದ ಭಜನಾ ತಂಡದ ಪ್ರಮುಖರಾದ ಸಂತೋಷ ಶೇಟ, ನಾರಾಯಣ ಶಿರೂರು, ರಾಜಶೇಖರ ನಾಯ್ಕ, ಅನಂತ ಭಟ್, ಕಟಗಾರಕೊಪ್ಪ,ರಾಜೇಶ, ಖಾರ್ವಿ,ನಾಗರಾಜ ಖಾರ್ವಿ, ಇವರನ್ನು ಸ್ವಾಮೀಜಿಗಳು ಗೌರವಿಸಿದರು, ನಂತರ ಮಹಾಪೂಜೆ ನಂತರ ಅನ್ನಪ್ರಸಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ,ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅದ್ಯಕ್ಷ ಶ್ರೀಧರ ನಾಯ್ಕ,ಶಿರಾಲಿ ನಾಮಧಾರಿ ಕೂಟದ ಅಧ್ಯಕ್ಷ ಸುಬ್ರಾಯ, ಭಟ್ಕಳ ಗುರುಮಠದ ಅಧ್ಯಕ್ಷರಾದ ಕ್ರಷ್ಣ ನಾಯ್ಕ, ಉಪಾದ್ಯಕ್ಷ ಭವಾನಿಶಂಕರ, ಕಾರ್ಯದರ್ಶಿ ಮಾಸ್ತಿ ನಾಯ್ಕ, ಪ್ರಮುಖರಾದ ಎಂ.ಜಿ.ನಾಯ್ಕ, ಹೊನ್ನಾವರ,ಎಸ್.ಎಂ.ನಾಯ್ಕ,ಕೆ.ಆರ್.ನಾಯ್ಕ, ವಿಠ್ಠಲ್ ನಾಯ್ಕ, ಮಂಜಪ್ಪ ನಾಯ್ಕ,ಜಾಲಿ,ಗಣಪತಿ ನಾಯ್ಕ ಮುಠ್ಠಳ್ಳಿ,ವಿನಾಯಕ ನಾಯ್ಕ,ಮಂಜುನಾಥ ನಾಯ್ಕ,ತಲಗೋಡು,ಗಣಪತಿ ಜಾಲಿ, ಮತ್ತಿತರರು ಇದ್ದರು,
ವೆಂಕಟೇಶ ನಾಯ್ಕ ತಲಗೋಡು ಕಾರ್ಯಕ್ರಮ ನಿರ್ವಹಿಸಿದರು.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.