ಭಟ್ಕಳ ನಗರದಲ್ಲಿ ಮಂಗಳವಾರ ರಾತ್ರಿ ಮೂರು ಅಂಗಡಿಗಳನ್ನು ಹಾಗೂ ಒಂದು ಮನೆಯನ್ನು ಹೊಕ್ಕು ಕಳ್ಳತನ ಮಾಡಿರುವ ಕುರಿತು ವರದಿಯಾಗಿದೆ.
ನಗರ ಮಧ್ಯದಲ್ಲಿರುವ ಮಾರಿಕಟ್ಟೆಯ ಸಮೀಪ ಇರುವ ಬುರ್ಖಾ ಅಂಗಡಿಯ ಶೆಟರ್ ಬೀಗ ಮುರಿದು ಒಳ ಹೊಕ್ಕಿದ್ದ ಕಳ್ಳರು ೩೦ ಸಾವಿರ ರೂಪಾಯಿ ನಗದು, ಬುರ್ಖಾ ಹಾಗೂ ಬೆಲೆ ಬಾಳುವ ಕೆಲವು ವಸ್ತುಗಳನ್ನು ಕದ್ದೊಯ್ದಿದ್ದಾರೆ. ಇನ್ನೊಂದು ಅಂಗಡಿಯ ಶಟರ್ ಬೀಗು ಮುರಿದು ಒಳ ಹೊಕ್ಕಿದ್ದು ೧೦ ಸಾವಿರ ನಗದು ಹಾಗೂ ಕೆಲವು ವಸ್ತುಗಳನ್ನು ಕಳವು ಮಾಡಿದ್ದಾರೆ. ಇನ್ನೊಂದು ಅಂಗಡಿ ಬೀಗ ಮುರಿದು ಒಳ ಹೊಕ್ಕಿದ್ದ ಕಳ್ಳರು ಏನೂ ದೊರೆಯದಿದ್ದಾಗ ಪಕ್ಕದಲ್ಲಿಯೇ ಬೀಗ ಹಾಕಿಕೊಂಡಿದ್ದ ಮನೆಯ ಬೀಗ ಮುರಿತು ಒಳ ಹೊಕ್ಕು ೧೦ ಸಾವಿರ ರೂಪಾಯಿ ನಗದು, ಎರಡು ಚಿನ್ನದ ಚೈನ್, ಮೂರು ಚಿನ್ನದ ಉಂಗುರವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ತಕ್ಷಣ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಿನ ಜಾವ ಸುಮಾರು ೩.೩೦ ಗಂಟೆಯ ಸಮಯಕ್ಕೆ ಕಳ್ಳರು ಬೀಗ ಮುರಿದಿದ್ದು ಕೆಲವೊಂದು ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದೆ. ತಮಗೆ ಕಂಡ ಕೆಲವು ಸಿ.ಸಿ. ಕ್ಯಾಮರಾಗಳನ್ನು ತಿರುಗಿಸಿದ್ದರೂ ಸಹ ಕೆಲವು ಕೆಮರಾಗಳಲ್ಲಿ ಕಳ್ಳರ ಚಹರೆ ದಾಖಲಾಗಿದ್ದು ಅವರು ನಡೆಸಿದ್ದ ಕೃತ್ಯವೂ ಕೂಡಾ ಬಯಲಾಗಿದೆ.
ಮಾರಿಕಟ್ಟೆಯ ಪ್ರದೇಶದಲ್ಲಿರುವ ಅಂಗಡಿಗಳನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ಸ್ಥಳೀಯವಾಗಿ ಸಂಪೂರ್ಣ ಮಾಹಿತಿ ಇದ್ದವರೇ ಎನ್ನುವುದು ಸ್ಪಷ್ಟವಾಗುತ್ತಿದ್ದು ಪೊಲೀಸರಿಗೆ ಸಿ.ಸಿ. ಟಿ.ವಿ. ದೃಷ್ಯದಲ್ಲಿ ಕೂಡಾ ಕೆಲವೊಂದು ಚಲನವಲನಗಳು ಕಂಡು ಬಂದಿದ್ದರಿoದ ಪತ್ತೆ ಹಚ್ಚುವುದು ಸುಲಭ ಎನ್ನುವ ಮಾತು ಸಾರ್ವಜನಿಕರಲ್ಲಿ ಕೇಳಿ ಬಂದಿದೆ. ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
More Stories
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.
ಸಮುದ್ರ ಕಿನಾರೆಯಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಬಾಲಕರು ನೀರು
ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮುಂಬತ್ತಿ ಪ್ರಜ್ವಲನೆ ಕಾರ್ಯಕ್ರಮ