April 27, 2024

Bhavana Tv

Its Your Channel

ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು

ಭಟ್ಕಳ: ಚಲಿಸುತ್ತಿದ್ದ ರೈಲೊಂದು ವ್ಯಕ್ತಿಯೋರ್ವರಿಗೆ ಬಡಿದು ಸಾವನ್ನಪ್ಪಿದ ಘಟನೆ ಭಟ್ಕಳ ತಾಲೂಕಿನ ಬಸ್ತಿಯಲ್ಲಿನ ಕೊಪ್ಪಾ ರಸ್ತೆ ಸಮೀಪದ ರೈಲ್ವೆ ಹಳಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ನಾರಾಯಣ ಬಾಕಡ ಬಸ್ತಿಯ ಬಾಕಡ ಕೇರಿ ನಿವಾಸಿ ಎಂದು ತಿಳಿದು ಬಂದಿದೆ. ಈತ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಮನೆಯಲ್ಲಿ ಬಸ್ತಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವನು
ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ, ಬೆಳಿಗ್ಗೆ ೮ ಗಂಟೆಯಿAದ ೧೦ ಗಂಟೆಯ ಅವಧಿಯಲ್ಲಿ ಬಸ್ತಿ ಕೊಪ್ಪಾ ರೋಡ್ ಸಮೀಪದಲ್ಲಿನ ರೈಲ್ವೆ ಹಳಿಯಲ್ಲಿ ಮೃತ ದೇಹ ದೊರೆತಿದ್ದು ಚಲಿಸುತ್ತಿದ್ದ ಯಾವುದೋ ರೈಲು ಬಡಿದು ಬಾರಿ ಸ್ವರೂಪದ ಗಾಯದೊಂದಿಗೆ ಮೃತ ಪಟ್ಟಿರಬುದು ಎಂದು ಅಂದಾಜಿಸಲಾಗಿದೆ.

ಈ ಕುರಿತು ಮುರುಡೇಶ್ವರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: