ಭಟ್ಕಳ: ತಾಲ್ಲೂಕಿನ ಕುಟುವಾಣಿ ಅರೂಕಿ ಬಳಿ ಸಿಮೆಂಟ್ ರಸ್ತೆ ಮಾಡಲು ಬರುತ್ತಿದ್ದ ಕಾಂಕ್ರೀಟ್ ಮಿಶ್ರಣ ಮಾಡುವ ವಾಹನ ಒಂದು ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ
ಕಿರಣ ಪವರ್ ೨೧ ವರ್ಷ ಮೃತಪಟ್ಟ ವ್ಯಕ್ತಿಯಾಗಿದ್ದು ವಿಜಯಪುರದ ಮುದೇಬಿಹಾಳ ನಿವಾಸಿ ಎಂದು ತಿಳಿದು ಬಂದಿದೆ.ವಾಹನವು ರಸ್ತೆ ಬದಿಯಿಂದ ಇಳಿಜಾರು ಪ್ರದೇಶದಲ್ಲಿ ಜಾರಿ ಬಿದ್ದಿದ್ದು ವಾಹನದಲ್ಲಿ ೨ ಜನ ಸಿಲುಕಿಕೊಂಡಿದ್ದು ಅಲ್ಲೆ ಅಕ್ಕ ಪಕ್ಕದಲ್ಲಿ ಇದ್ದ ಸಾರ್ವಜನಿಕರು ಕಾಲಿಗೆ ಬಲವಾದ ಏಟು ಬಿದ್ದಿದ್ದ
ಚಾಲಕ “ಸುನೀಲ್ ಸುರೇಶ್ ದೊಡ್ಡ ಕಟ್ಟಿ”ಅವರನ್ನು ರಕ್ಷಣೆಗೆ ಮಾಡಿ ೧೦೮ ಆಂಬುಲೆನ್ಸ್ ಮುಖಾಂತರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ನಂತರ ಮೃತಪಟ್ಟ ವ್ಯಕ್ತಿಯನ್ನು ಪೋಲಿಸರು,ಅಗ್ನಿಶಾಮಕ ದಳದವರು,೧೧೨
ಇಆರ್ಎಸ್ ಎಸ್ ತುರ್ತು ಸೇವೆಯ ವಾಹನಗಳದ ಪೋಲಿಸರು, ಸಾರ್ವಜನಿಕರು ಸಹಾಯದಿಂದ ವಾಹನ ದಲ್ಲಿ ಸಿಲುಕಿಕೊಂಡಿದ್ದ ಶವವನ್ನು ಹರ ಸಾಹಸ ಪಟ್ಟು ಮೇಲಕ್ಕೆ ಎತ್ತಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪಿ.ಎಸ್.ಐ ಭರತ ನಾಯಕ, ಪೋಲಿಸ್ ಸಿಬ್ಬಂದಿಗಳು, ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕೆ ರಮೇಶ,ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ,ಮುಂತಾದವರು ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ