May 16, 2024

Bhavana Tv

Its Your Channel

ಅತಿವೃಷ್ಟಿಯಿಂದಾಗಿ ಅಪಾರ ಹಾನಿಯುಂಟಾಗಿರುವ ಮೀನುಗಾರರಿಗೆ ತಕ್ಷಣ ಪರಿಹಾರ ನೀಡುವಂತೆ ವೆಲ್ಫೇರ್ ಪಾರ್ಟಿಆಗ್ರಹ

ಭಟ್ಕಳ :ಅತಿವೃಷ್ಟಿಯಿಂದಾಗಿ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುAಡಿಯಲ್ಲಿ ಮೀನುಗಾರಿಕೆ ದೋಣಿಗಳು ಹಾನಿಗೊಳಗಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದ್ದು ಸರ್ಕಾರ ತಕ್ಷಣವೇ ಪ್ರತಿ ಮೀನುಗಾರರ ಕುಟುಂಬಕ್ಕೆ ರೂ.1ಲಕ್ಷ ಪರಿಹಾರ ನೀಡಬೇಕೆಂದು ವೆಲ್ಫೇರ್ ಪಾರ್ಟಿಆಫ್‌ಇಂಡಿಯಾಉತ್ತರಕನ್ನಡಜಿಲ್ಲಾ ಸಮಿತಿ ತಹಸಿಲ್ದಾರರಿಗೆ ಆಗ್ರಹಿಸಿದೆ.
ಈ ಕುರಿತಂತೆ ಸೋಮವಾರ ಜಿಲ್ಲಾ ಸಮಿತಿಯ ನಿಯೋಗವೊಂದು ತಹಸಿಲ್ದಾರರ ಸುಮಂತ್ ಬಿ.ಯವರನ್ನು ಭೇಟಿಯಾಗಿ ಮನವಿ ಅರ್ಪಿಸಿತು.
ಅತಿವೃಷ್ಟಿಯಿಂದಾಗಿ ಸಂಕಷ್ಟದಲ್ಲಿರುವ ಮೀನುಗಾರ ಕುಟುಂಬ ಭರಿಸಲಾಗದ ನೋವಿನಲ್ಲಿದೆ.ತಾಲೂಕಾಡಳಿತ ತಕ್ಷಣವೇ ಸ್ಪಂಧಿಸುವುದರ ಮೂಲಕ ಬಡಮೀನುಗಾರರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಆಫ್‌ಇಂಡಿಯಾಉತ್ತರಕನ್ನಡಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್, ಖಜಾಂಚಿಅಬ್ದುಲ್‌ಜಬ್ಬಾರ್ ಅಸದಿ, ಮುಖಂಡರಾದ ಫಾರೂಕ್ ಶೇಕ್, ಯುವಮುಖಂಡಝಹೂರ್ ಲಾಟ್ ಮುಂತಾದವರು ಹಾಜರಿದ್ದರು.


error: