May 16, 2024

Bhavana Tv

Its Your Channel

ಜೆಇಇ ಮೇನ್ ಫಲಿತಾಂಶ ಪ್ರಕಟ; ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಭಟ್ಕಳ:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಜಂಟಿ ಪ್ರವೇಶ ಪರೀಕ್ಷೆ ಮುಖ್ಯ (ಜೆಇಇ ಮೈನ್) 2022 ಸೆಷನ್-2ರ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಪರ್ಸೆಂಟೈಲ್ ರ‍್ಯಾಂಕ್‌ಗಳನ್ನು ಪಡೆದು ಉತ್ತರಕನ್ನಡ ಜಿಲ್ಲೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕುಮಾರ ಅನಂತ ಸುಧೀರ ಕಾಮತ್ 97.91 % ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾನೆ. ಈತನು ಸಾಮಾನ್ಯ ವರ್ಗದಲ್ಲಿ (ಇ.ಡಬ್ಲೂ.ಎಸ್.) 2630 ನೇ ರ‍್ಯಾಂಕ್ ಹಾಗೂ ಸಾರ್ವತ್ರಿಕ ಸಾಮಾನ್ಯ ರ‍್ಯಾಂಕ್ ಪಟ್ಟಿಯಲ್ಲಿ (ಸಿ.ಆರ್.ಎಲ್.) 18932ನೇ ರ‍್ಯಾಂಕ್ ಪಡೆದು ಸಾಧನೆ ಗೈದಿದ್ದಾನೆ ಮತ್ತು ಕುಮಾರ ಧೀರಜ್ ರಾಮಚಂದ್ರ ನಾಯ್ಕ 91.53 %, ಕುಮಾರ ಚರಣ ದಾಮೋದರ ನಾಯ್ಕ 91.26% ಮತ್ತು ಇನ್ನಿತರ ವಿದ್ಯಾರ್ಥಿಗಳು ಪ್ರಮುಖ ರ‍್ಯಾಂಕ್ ಪಡೆದು ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಾಗೂ ಉನ್ನತ ಮಟ್ಟದ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಹತೆಯನ್ನು ಪಡೆದು ಕೊಂಡಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಕಾರ್ಯದರ್ಶಿಗಳು, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

error: