May 1, 2024

Bhavana Tv

Its Your Channel

ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆಯ ತಾಲೂಕ ಘಟಕದ ಸಂಘದಿoದ ಶಂಕರ್ ನಾಗ್ ಜನ್ಮದಿನಾಚರಣೆ ಹಾಗೂ ಚಾಲಕರ ದಿನಾಚರಣೆ

ಭಟ್ಕಳ:- ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ಇದರ ತಾಲೂಕ ಘಟಕದ ಸಂಘದಿAದ ಶಂಕರ್ ನಾಗ್ ಜನ್ಮದಿನಾಚರಣೆ ಹಾಗೂ ಚಾಲಕರ ದಿನಾಚರಣೆಯನ್ನು ಸೋಡಿ ಗದ್ದೆ ಕ್ರಾಸ್‌ನ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಬಹಳ ಸಡಗರದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷರಾದ ತಿಮ್ಮ ನಾಯ್ಕ ಶಂಕರ್ ನಾಗ್ ಉತ್ತಮವಾದಂತ ಕ್ರಿಯಾಶೀಲ ನಿರ್ದೇಶಕರಾಗಿದ್ದರು ಆಗಿನ ಕಾಲದಲ್ಲಿ ಅವರು ಆಟೋ ರಾಜ ಎನ್ನುವಂತ ಸಿನಿಮಾವನ್ನು ತೆಗೆದು ಚಾಲಕರ ಮನಸ್ಸಿನಲ್ಲಿ ನೆಲೆಯೂರಿದ್ದರು, ಚಾಲಕರು ತಮ್ಮ ಕಷ್ಟದ ದುಡಿಮೆಯಿಂದ ಜೀವನವನ್ನು ಸಾಗಿಸಿ ಇವತ್ತು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಲಕ್ಷ್ಮಣ್ ನಾಯ್ಕರವರು ಕೇಕ್ ಅನ್ನು ತಂದು ನೆರೆದಂತ ಎಲ್ಲ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಿದರು ಈ ಸಂದರ್ಭದಲ್ಲಿ ಚಾಲಕರಾದ ಸೀತಾರಾಮ್ ನಾಯ್ಕ, ಲಕ್ಷ್ಮಣ್ ನಾಯ್ಕ ಕೇಶವ ನಾಯ್ಕ ಮುಂತಾದ ಚಾಲಕರು ಭಾಗವಹಿಸಿದ್ದರು. ನಂತರ ಎಲ್ಲ ಚಾಲಕರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ತಿಮ್ಮ ನಾಯ್ಕ ಲಕ್ಷ್ಮಣ್ ನಾಯ್ಕ ಕೇಶವ ನಾಯ್ಕ ಇವರು ಆಯೋಜಿಸಿದ್ದರು. ಕಾರ್ಯಕ್ರಮವನ್ನು ಸೂರ್ಯಕಾಂತ್ ಎಸ್ ನಾಯ್ಕ ನಿರೂಪಿಸಿ ವಂದಿಸಿದರು

error: