April 29, 2024

Bhavana Tv

Its Your Channel

ಶ್ರೀ ದೈವಜ್ಞ ನಾಗಬನದಲ್ಲಿ ವಿಜೃಂಭಣೆಯಿoದ ನಡೆದ 30 ನೇ ವರ್ಷದ ಕಾರ್ತಿಕ ದೀಪೋತ್ಸವ

ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಚಿತ್ರಾಪುರ ರಸ್ತೆ ಅಂದರೆ ಶ್ರೀಮದ್ ಪಾಂಡುರಂಗಾಶ್ರಮ ಮಾರ್ಗದಲ್ಲಿರುವ ಚನಲ್ ದಂಡೆಯ ಮೇಲಿನ ಶ್ರೀ ದೈವಜ್ಞ ನಾಗಬನದಲ್ಲಿ ದೀಪೋತ್ಸವ ಸಂಘಟಕರು ಮತ್ತು ದಿವಂಗತ ಮಂಜಪ್ಪ ಬಾಬು ಶೇಟ್ ಕುಟುಂಬದವರ ಸಹಕಾರದಲ್ಲಿ 30 ನೇ ವರ್ಷದ ಕಾರ್ತಿಕ ದೀಪೋತ್ಸವವು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಯಶಸ್ವಿಯಾಗಿ ನಡೆಯಿತು.

ದೀಪೋತ್ಸವ ಸಂಘಟಕರು, ಸ್ಥಳೀಯ ಯುವಕರು,ಗಣ್ಯರು ಮತ್ತು ಹಿರಿಯ ನಾಗರಿಕರು ಈ ದೀಪೋತ್ಸವವನ್ನು ಹಾಗೂ ಎಲ್ಲಾ ಕಾರ್ಯಕ್ರಮಗಳನ್ನು ಬಹಳ ಪರಿಶ್ರಮ ಮತ್ತು ಶೃದ್ಧೆಯಿಂದ ನಡೆಸಿಕೊಟ್ಟರು.ಊರಿನ ಮತ್ತು ಪರವೂರಿನ ನೂರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀ ನಾಗದೇವರ ಮತ್ತು ಶ್ರೀ ನಾಗಯಕ್ಷೆ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾದರು. ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಮತ್ತು ಸಂಜೆ ಚಿತ್ರಾಪುರದ ಶ್ರೀಮಹಾಸತಿ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮಗಳು ನಡೆದವು. ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಶ್ರೀ ದುರ್ಗಾಪರಮೇಶ್ವರಿ ಚಂಡೆ ವಾದ್ಯವೃಂದದವರಿಂದ ಚಂಡೆ ವಾದನದ ಪ್ರದರ್ಶನ ನಡೆಯಿತು. ನಂತರ ಚಿತ್ರಾಪುರದ ಶೀ ಮಹಾಸತಿ ಹವ್ಯಾಸಿ ನಾಟಕ ಬಳಗದವರಿಂದ ಈಗ ಹ್ಯಾಂಗಾತು ಅರ್ಥಾತ್ ನನ್ನ ತಂಗಿ ಅಂಥವಳಲ್ಲ ಎಂಬ ಸುಂದರ ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶಿಸಲಾಯಿತು. ಸ್ಥಳೀಯ ಕಲಾವಿದರಾದ ದೇವೇಂದ್ರ ಎಮ್. ನಾಯ್ಕ ರವರು ಈ ನಾಟಕವನ್ನು ನಿರ್ದೇಶಿಸಿದ್ದರು. ಈ ನಾಟಕದಲ್ಲಿ ಸ್ಥಳೀಯ ಕಲಾವಿದರಾದ
ಚಂದ್ರಕಾಂತ ಕೆ ನಾಯ್ಕ,ನಂದನ ಜೆ ನಾಯ್ಕ,ನಾಗರಾಜ ಪಟಗಾರ,ಗಣಪತಿ ನಾಯ್ಕ,ಕೃಷ್ಣಾನಂದ ಶಿರಾಲಿ,ನಟರಾಜ ದೇವಡಿಗ,ಗುರುದತ್ತ ದೇವಡಿಗ, ಕೃಷ್ಣ ಜೆ ಭೈರುಮನೆ,ಮಂಜುನಾಥ ಆಚಾರಿ,ಕೇಶವ ನಾಯ್ಕ,
ಚೈತ್ರ ಹುಬ್ಬಳ್ಳಿ,ಸವಿತಾ ಗದಗ ಮತ್ತಿತರರು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.

error: