May 14, 2024

Bhavana Tv

Its Your Channel

ಎನ್.ಎಸ್.ಎಸ್ ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ರಾಷ್ಟಿçÃಯ ಯುವ ದಿನದ ಪೂರ್ವಭಾವಿಯಾಗಿ ಭಟ್ಕಳದ ಸಾಗರ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವು ಜರುಗಿತು. ಭಟ್ಕಳ ಪುರಸಭೆಯ ಸುಜಿಯಾ ಸುಮನ ರವರು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಎನ್.ಎಸ್.ಎಸ್ ಘಟಕವು ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಮಾಜಿಕ ಕಾಳಜಿಯುಳ್ಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೇಂದು ಕರೆ ನೀಡಿದರು.
ಎನ್.ಎಸ್.ಎಸ್ ಸ್ವಯಂಸೇವಕರು ಭಟ್ಕಳದ ಶಂಶುದ್ದೀನ ಸರ್ಕಲ್ ನಿಂದ ಶ್ರೀ ಗುರು ಸುಧೀಂದ್ರ ಕಾಲೇಜಿನ ವರೆಗೆ ರಸ್ತೆಯನ್ನು ಪ್ಲಾಸ್ಟಿಕ ಮುಕ್ತವನ್ನಾಗಿಸಿದರು. ಎನ್.ಎಸ್.ಎಸ್ ಸಂಯೋಜಕರಾದ ಶಾಂತರಾಯ ಜಿ, ಉಪ ಸಂಯೋಜಕರಾದ ಶ್ರೀ ವಿನಾಯಕ ನಾಯ್ಕ, ಉಪಪ್ರಾಂಶುಪಾಲರಾದ ವಿಖ್ಯಾತ ಪ್ರಭು, ಉಪನ್ಯಾಸಕರು, ಸಿಬ್ಬಂದಿಗಳು, ಸ್ವಯಂಸೇವಕರು ಉಪಸ್ಥಿತರಿದ್ದರು.

error: