May 15, 2024

Bhavana Tv

Its Your Channel

ಭಟ್ಕಳ ಕಡವಿನ ಕಟ್ಟೆಯಲ್ಲಿ ಚಿರತೆಯ ಹಾವಳಿ ಹಿನ್ನೆಲೆ ಸ್ಥಳಕ್ಕೆ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಭೇಟಿ

ಭಟ್ಕಳ ತಾಲೂಕಿನ ಕಡವಿನ ಕಟ್ಟೆಯ ಪ್ರದೇಶದಲ್ಲಿ ಚಿರತೆ ಒಂದು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳಿಯ ಸಾರ್ವಜನಿಕರಿಗೆ ದೈರ್ಯ ತುಂಬಿದ್ದು ಚಿರತೆ ಹಿಡಿಯುವ ಕಾರ್ಯ ನಾಳೆಯಿಂದ ನಡೆಸಲಾಗುವುದು ಎಂದು ಹೇಳಿದ್ದಾರೆ.

ಭಟ್ಕಳದ ಕಡವಿನಕಟ್ಟೆಯಲ್ಲಿ ಚಿರತೆ ಪ್ರತ್ಯಕ್ಷ ಆಗಿದ್ದು ಅಲ್ಲಿಯ ಜನರು ತುಂಬಾ ಭಯಬಿತರಾಗಿದ್ದಾರೆ ಚಿರತೆ ದಾಳಿಗೆ ಒಂದು ದನ ಬಲಿಯಾಗಿತ್ತು ಅಲ್ಲಿಯ ಭಾಗದ ಜನರು ಮನೆ ಬಿಟ್ಟು ಹೊರಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿತ್ತು ಜನರಲ್ಲಿ ಬಾರಿ ಆತಂಕ ಹುಟ್ಟುಕೊಂಡಿದ್ದು ಇದನ್ನು ತಿಳಿದ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣ ಕಾರ್ಯಪಡೆಯ ಸಮಿತಿಯ ಅಧ್ಯಕ್ಷರಾದ ಗೋವಿಂದ ನಾಯ್ಕ ಅವರು ಸ್ಥಳಕ್ಕೆ ಬೇಟಿ ನೀಡಿ ಅರಣ್ಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಪರಿಶೀಲನೆ ನಡೆಸಿ, ಮತ್ತು ಅಲ್ಲಿಯ ಜನರನ್ನು ಮಾತನಾಡಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಚಿರತೆ ಪಂಜರವನ್ನು ವ್ಯವಸ್ಥೆ ಮಾಡಿಸಿ ಚಿರತೆ ಹಿಡಿಯುವ ಕಾರ್ಯ ನಾಳೆಯಿಂದ ಪ್ರಾರಂಭ ಮಾಡುವಂತೆ ಅರಣ್ಯ ಅಧಿಕಾರಿಗಳು ಸೂಚನೆ ನೀಡಲಾಯಿತು.

error: