ಭಟ್ಕಳ: ಸಂಕ್ರಾತಿಯ ನಂತರ ಭಟ್ಕಳ ತಾಲೂಕಿನಲ್ಲಿ ನಡೆಯುವ ಎರಡನೇ ಜಾತ್ರೆ ಕೋಕ್ತಿ ಮಹಾಸತಿ ಜಾತ್ರೆಯು ಪ್ರಾರಂಭವಾಗಿದ್ದು, ಭಟ್ಕಳದ ಪ್ರಸಿದ್ಧ ಜಾತ್ರೆಗಳಲ್ಲಿ ಕೋಕ್ತಿ ಜಾತ್ರೆಯು ವಿಶೇಷವಾಗಿದೆ.
ಸಂಕ್ರಾತಿಯ ನಂತರ ಭಟ್ಕಳ ತಾಲೂಕಿನಲ್ಲಿ ನಡೆಯುವ ಎರಡನೇ ಜಾತ್ರೆ ಕೋಕ್ತಿ ಮಹಾಸತಿ ಜಾತ್ರೆ. ಪಟ್ಟಣದ ಮಧ್ಯದಲ್ಲಿದ್ದರು ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಬ್ಬನ್ನು ಖರೀದಿಸುವುದೇ ಈ ಜಾತ್ರೆಯ ವಿಶೇಷವಾಗಿದೆ. ಇಲ್ಲಿ ಗೊಂಡ ಸಮಾಜದ ಜಾನಪದ ಶೈಲಿಯಲ್ಲಿ ಜಾತ್ರಾ ವಿಶೇಷಗಳನ್ನು ಕಾಣಬಹುದು.
ಬಂದರ ರಸ್ತೆಯಲ್ಲಿ ಇರುವ ಗುಡಿಜಟಿಗ ದೇವಸ್ಥಾನ ಕ್ಕೆ ಮೊದಲು ಪೂಜೆ ಸಲ್ಲಿಸಿ ದೈವವನ್ನು ಆರಾಧನೆ ಮಾಡೋದು ವಿಶೇಷವಾಗಿದ್ದು ಅಲ್ಲಿಂದ ದಕ್ಕೆ ಕುಣಿತದಲ್ಲಿ ಮೆರವಣಿಗೆ ಮುಕಾಂತರ ಕೋಕ್ತಿ ಮಹಾಸತಿ ದೇವಸ್ಥಾನ ಕ್ಕೆ ತಲುಪುತ್ತಾರೆ.
ದೇವಸ್ಥಾನವೂ ಪ್ರಮುಖವಾಗಿ ಗೊಂಡ ಸಮಾಜದವರೇ ನಂಬಿಕೊOಡು ಬಂದ ಸ್ಥಳವಾಗಿದೆ. ಇಲ್ಲಿಯ ವಿಶೇಷಗಳಲ್ಲಿ ಕಬ್ಬನ್ನು ಖರೀದಿಸುವುದು ಒಂದು. ಸುಗ್ಗಿಯ ಸಂಭ್ರಮದಲ್ಲಿರುವ ರೈತಾಪಿ ಜನರು ತಮ್ಮ ಬಿಡುವಿನ ವೇಳೆಯಲ್ಲಿ ಜಾತ್ರೆಯಲ್ಲಿ ಬಂದು ಮನೆ ಮನೆಗೆ ಕಬ್ಬಿನ ಕುಡಿ ಕೊಂಡೊಯ್ಯಲಿ, ಆ ಕುಡಿಯು ಸಹಸ್ರ ಕುಡಿಯಾಗಿ ಮನೆ ಯಜಮಾನನ ಸಂಪತ್ತು ವೃದ್ಧಿಯಾಗಲಿ ಎನ್ನುವ ವಾಡಿಕೆಯಿದೆ.
ಇನ್ನೊಂದು ಪ್ರತೀತಿಯೆಂದರೆ ಜಾತ್ರೆಯ ನಂತರ ಮುಂದಿನ ಜಾತ್ರೆಯ ತನಕ ಮದುವೆಯಾಗಿರುವ ಗೊಂಡ ಸಮಾಜದ ನೂತನ ವಧು-ವರರು ಜಾತ್ರೆಗೆ ಬಂದು ಇಲ್ಲಿನ ಕೋಕ್ತಿಯ ಕೆರೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ಮನೆಗೆ ಹೋಗುವಾಗ ಕಬ್ಬಿನ ಕುಡಿ ತೆಗೆದುಕೊಂಡು ಹೋದರೆ ಅವರ ಕುಟುಂಬದ ಕುಡಿ ಮುಂದುವರೆಯುವುದು ಎಂಬ ಅಗಾಧವಾದ ನಂಬಿಕೆ. ಇಲ್ಲಿ ಮಹಾಸತಿ ದೇವರ ಪೂಜೆ, ಹಾಗೂ ಆಸರಕೇರಿ ಕೊಲ್ಲಿಮನೆ ಕುಟುಂಬದವರು ಅವರಿಂದ ಶೇಡಿ ಮರದ ಕ್ಕೆ ಹೊ ಕಟ್ಟಿ ಪೂಜಿಸಲಾಗುತ್ತಿತ್ತು ಸಾವಿರಾರು ಭಕ್ತರು ಜಾತ್ರೆಯಂದು ಸೇರುವುದೇ ಒಂದು ವಿಶೇಷವಾಗಿದೆ ದಕ್ಕೆ ಕುಣಿತವನ್ನು ಬಿಳಲಖಂಡ ಮಂಗಳಾ ಗೊಂಡ ಕುಟುಂಬದವರ ಮುಂದಾಳತ್ವ ದಲ್ಲಿ ನಡೆಯಿತು.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ