ಭಟ್ಕಳ: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ಟಾಟಾ ನ್ಯಾನೋ ಕಾರೊಂದು ಡಿಕ್ಕಿ ಹೊಡೆದಿದ್ದು ಸೈಕಲ್ ಸವಾರ ಮೃತಪಟ್ಟ ಘಟಣೆ ಮುರ್ಡೇಶ್ವರ ಪೋಲಿಸ್ ಠಾಣೆ ವ್ಯಾಪತಿಯ ಹೆರಾಡಿ ಬಳಿ ನಡೆದಿದೆ.
ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆರಾಡಿ ಕ್ರಾಸ್ ಬಳಿಯಲ್ಲಿ ಶನಿವಾರ ರಾತ್ರಿ ತನ್ನ ಸೈಕಲ್ನಿಂದ ಇಳಿದು ಸೈಕಲ್ ದೂಡಿಕೊಂಡು ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ಟಾಟಾ ನ್ಯಾನೋ ಕಾರೊಂದು ಡಿಕ್ಕಿ ಹೊಡೆದಿದ್ದು ರವಿವಾರ ಬೆಳಗಿನ ಜಾವ ಸೈಕಲ್ ಸವಾರ ಮೃತ ಪಟ್ಟ ಕುರಿತು ಆತನ ಮಗ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾನೆ.
ಮೃತನನ್ನು ಸುಬ್ರಾಯ ತಂದೆ ತಿಮ್ಮಪ್ಪ ನಾಯ್ಕ (67) ಎಂದು ಗುರುತಿಸಲಾಗಿದೆ. ಈತನು ಬಸ್ತಿಯಲ್ಲಿ ಜ್ಯೂಸ್ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು ರಾತ್ರಿ ತನ್ನ ಸೈಕಲ್ ಮೇಲೆ ಮನೆಗೆ ಬರುತ್ತಿರುವಾಗ ರಾಷ್ಟಿçÃಯ ಹೆದ್ದಾರಿಯಲ್ಲಿ ತನ್ನ ಸೈಕಲ್ನಿಂದ ಕೆಳಕ್ಕೆ ಇಳಿದು ಸೈಕಲ್ ದೂಡಿಕೊಂಡು ರಸ್ತೆ ದಾಟುತ್ತಿರುವ ವೇಳೆಯಲ್ಲಿ ಅತಿವೇಗದಿಂದ ಬಂದ ನ್ಯಾನೋ ಕಾರಿನ ಚಾಲಕ ಮುರ್ಡೇಶ್ವರ ನ್ಯಾಶನಲ್ ಕಾಲೋನಿಯ ಅಮ್ಜದ್ ಅಲಿ ದೊಣ್ಣ ಇವರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಸುಬ್ರಾಯ ನಾಯ್ಕ ಇವರು ಕೆಳಕ್ಕೆ ಬಿದ್ದು ತಳೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆಯಿಂದ ಗುಣ ಪಡಿಸುವ ಭರವಸೆ ದೊರೆಯದ್ದರಿಂದ ಪುನಃ ಭಟ್ಕಳ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ರವಿವಾರ ಬೆಳಗಿನ ಜಾವ ಮೃತರಾಗಿದ್ದಾರೆ ಎಂದು ಆತನ ಪುತ್ರ ರಾಘವೇಂದ್ರ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
More Stories
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್
ಸಿದ್ದಾರ್ಥ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಾಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ