ಭಟ್ಕಳ:-ಫೆ.9ರಂದು ಕುಮಾರ್ ಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ ಭಟ್ಕಳಕ್ಕೆಬರಲಿದೆ ಎಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಟಿಕೇಟ್ ಆಕಾಂಕ್ಷಿ ಇನಾಯತುಲ್ಲಾ ಶಾಬಂದ್ರಿ ಹೇಳಿದ್ದಾರೆ.
ಭಟ್ಕಳ: ಮಾಜಿ ಮುಖ್ಯಮಂತ್ರಿ ಜೆ.ಡಿ.ಎಸ್ ವರಿಷ್ಠ ಎಚ್.ಡಿ.ಕುಮಾರ್ ಸ್ವಾಮಿ ನೇತೃತ್ವದಲ್ಲಿ ಆರಂಭಗೊಡಿರುವ ಪಂಚರತ್ನ ಯಾತ್ರೆ ಫೆ.9 ರಂದು ಭಟ್ಕಳ ತಲುಪಲಿದ್ದು ಅಂದು ಸಂಜೆ 6ಗಂಟೆಗೆ ಹಳೆ ಬಸ್ ನಿಲ್ದಾಣದ ಬಳಿ ಇರುವ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಟಿಕೇಟ್ ಆಕಾಂಕ್ಷಿ ಇನಾಯತುಲ್ಲಾ ಶಾಬಂದ್ರಿ ಹೇಳಿದ್ದಾರೆ.
ಅವರು ಜೆ.ಡಿ.ಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಫೆ.9ರಂದು ಉ.ಕ ಜಿಲ್ಲೆಗೆ ಆಗಮಿಸಲಿರುವ ಪಂಚರತ್ನ ಯಾತ್ರೆ ಅಂದು ಸಂಜೆ 3ಗಂಟೆಗೆ ಹೊನ್ನಾವರ ತಲುಪಲಿದ್ದು, ಕಾಸರಕೋಡು, ಅಪ್ಸರಕೊಂಡ, ಗುಣವಂತೆ, ಮಂಕಿ, ಮುರುಡೇಶ್ವರ, ಬಸ್ತಿ, ಶಿರಾಲಿ ಮಾರ್ಗವಾಗಿ ಭಟ್ಕಳ ತಲುಪಲಿದೆ. ಸಂಜೆ 6ಗಂಟೆಗೆ ಬೃಹತ್ ಸಮಾವೇಶ ನಡೆಯಲಿದ್ದು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಭಟ್ಕಳ ಕ್ಷೇತ್ರದಲ್ಲಿ ಈಗಾಗಲೆ ಹಲವು ಶಾಸಕರು ಇಲ್ಲಿನ ಅಭಿವೃದ್ಧಿಗಾಗಿ ಏನನ್ನೂ ಮಾಡದೆ ವಿಫಲರಾಗಿದ್ದು ಜನರು ಹೊಸ ಮುಖ ಬಯಸುತ್ತಿದ್ದಾರೆ. ಮತದಾರರು ತಮಗೊಂದು ಅವಕಾಶ ಕೊಟ್ಟರೆ ನಿಮ್ಮ ಮನೆಮಗನಾಗಿ ಕ್ಷೇತ್ರದ ಅಭಿವೃದ್ಧಿ ಮಾಡುವೆ ಎಂದು ತಿಳಿಸಿದರು.
ಇಲ್ಲಿನ ಮೊಗೇರ್, ಗೊಂಡ ಸಮುದಾಯದ ಸಮಸ್ಯೆ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗಳ ಕುರಿಂತೆ ಅವರ ಗಮನ ಸೆಳೆಯಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಜೆ.ಡಿ.ಎಸ್. ಯುವ ಮುಖಂಡ ಪಾಂಡುನಾಯ್ಕ, ಕೃಷ್ಣಾನಂದಾ ಪೈ, ಗಣಪತಿ ಭಟ್, ಝೈನುಲ್ ಆಬಿದೀನ್, ದ್ಯಾವಯ್ಯ ನಾಯ್ಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
More Stories
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು:
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ ೪೧ ನೇ ವಾರ್ಷಿಕ ಅಥ್ಲೆಟಿಕ್ ಮೀಟ್