April 29, 2024

Bhavana Tv

Its Your Channel

ಜ್ಯೂನಿಯರ್ ರಿಸರ್ಚ ಫೆಲೋ ಪರೀಕ್ಷೆಯಲ್ಲಿ 147ನೇ ರ‍್ಯಾಂಕ್ ಪಡೆದ ಕಾವ್ಯಶ್ರೀ

ಭಟ್ಕಳ : ತಾಲೂಕಿನ ಕೋಣಾರ ಗ್ರಾಮದ ಬೇಸೆಯವಳಾದ ಕಾವ್ಯಶ್ರೀ ಕುಪ್ಪಯ್ಯ ಗೊಂಡ ಈಕೆಯು ಅಖಿಲ ಭಾರತ ಮಟ್ಟದ ಜ್ಯೂನಿಯರ್ ರಿಸರ್ಚ ಫೆಲೋ ಪರೀಕ್ಷೆಯಲ್ಲಿ 147ನೇ ರ‍್ಯಾಂಕ್ ಗಳಿಸುವ ಮೂಲಕ ಅತ್ತ್ಯುತ್ತಮ ಸಾಧನೆ ಮಾಡಿದ್ದಾಳೆ.
ಕೌನ್ಸಿಲ್ ಆಫ್ ಸೈಂಟಿಫಿಕ್ ಎಂಡ್ ಇಂಡಸ್ಟಿçಯಲ್ ರಿಸರ್ಚ ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್ (ಸಿ.ಎಸ್.ಐ.ಆರ್-ನೆಟ್) ನಡೆಸುವ ಜ್ಯೂನಿಯರ್ ರಿಸರ್ಚ ಫೆಲೋ ಪರೀಕ್ಷೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಅಭ್ಯರ್ಥಿಗಳು ಭಾಗವಹಿಸುತ್ತಿದ್ದು ಅವರ ನಡುವೆ ಕಾವ್ಯಶ್ರೀ ಈಕೆಯ ಗಮನಾರ್ಹ ಸಾಧನೆ ಮಾಡಿದ್ದು ಗ್ರಾಮೀಣ ಪ್ರತಿಭೆಯಾಗಿರುವ ಈಕೆ ಜಿಲ್ಲೆಗಷ್ಟೇ ಅಲ್ಲ ರಾಜ್ಯಕ್ಕೆ ಗೌರವ ತಂದುಕೊಟ್ಟಿದ್ದಾಳೆ.
ಮೂಲತಹ ತಾಲೂಕಿನ ಗ್ರಾಮೀಣ ಭಾಗವಾದ ಕೋಣಾರದ ಬೇಸೆಯವಳಾದ ಈಕೆ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಊರಿನಲ್ಲಿ ಮಾಡಿದ್ದು ಪ್ರೌಢ ಶಾಲೆಯನ್ನು ನ್ಯೂ ಇಂಗ್ಲೀಷ್ ಶಾಲೆಯಲ್ಲಿ, ಪಿ.ಯು.ಸಿ.ಯನ್ನು ಸಿದ್ಧಾರ್ಥ ಪಿ.ಯು.ಕಾಲೇಜಿನಲ್ಲಿ, ಪದವಿಯನ್ನು ಕುಂದಾಪುರದ ಭಂಡಾರ್‌ರ‍್ಸ್ ಕಾಲೇಜಿನಲ್ಲಿ ಮುಗಿಸಿದ್ದು ಎಂ.ಎಸ್.ಸಿ.ಯನ್ನು ಉಜಿರೆಯ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾಲೇಜಿನಲ್ಲಿ ಮಾಡಿದ್ದಾಳೆ. ಪ್ರಸ್ತುತ ಮಂಗಳೂರು ಯುನಿವರ್ಸಿಟಿಯಲ್ಲಿ ಡಾ. ಎಂ.ಆರ್.ಮದ್ದಾನಿ ಅವರಲ್ಲಿ ಆರ್ಗಾನಿಕ್ ಕೆಮೆಸ್ಟಿçಯಲ್ಲಿ ಪಿ.ಎಚ್.ಡಿ. ಮಾಡುತ್ತಿದ್ದಾಳೆ. ಈಕೆಯು ಸಹಾಯಕ ಸರಕಾರಿ ಅಭಿಯೋಜಕರ ಕಚೇರಿ ಸಹಾಯಕ ಕುಪ್ಪಯ್ಯ ಗೊಂಡ ಹಾಗೂ ಲಕ್ಷ್ಮೀ ಗೊಂಡ ಇವರ ಪುತ್ರಿ.

error: