May 12, 2024

Bhavana Tv

Its Your Channel

ತೈಲ ಬೆಲೆ ಏರಿಕೆ ಖಂಡಿಸಿ ಕೆಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಪ್ರತಿಭಟನೆ

ಹೊನ್ನಾವರ ; ಜಿಲ್ಲಾ ಕಿಸಾನ್ ಕಾಂಗ್ರೆಸ್ ಮತ್ತು ಹೊನ್ನಾವರ ಬ್ಲಾಕ್ ಕಿಸಾನ್ ಕಾಂಗ್ರೆಸ್ ವತಿಯಿಂದ ಹಳದಿಪುರ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಪೆಟ್ರೋಲ್ ಬಂಕ್ ಎದುರು ತೈಲ ಬೆಲೆ ಏರಿಕೆ ಖಂಡಿಸಿ ಕೆಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ರೈತ ವಿರೋಧಿ ಕಾನೂನುಗಳ ಜಾರಿಯೊಂದಿಗೆ ಬೇಕಾಬಿಟ್ಟಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿ ರೈತರ ಬದುಕು ಹೈರಾಣಾಗಿಸಿದ ಬಿಜೆಪಿ ಸರ್ಕಾರಗಳ ವಿರುದ್ಧ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಮೊಳಗಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ಕರ್ಕಿ ಮಾತನಾಡಿ ಯುಪಿಎ ಸರ್ಕಾರ ಇದ್ದಾಗ ಕಚ್ಚಾ ತೈಲದ ಬೆಲೆ ೧೪೧ ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ  ೮೦ ರೂಪಾಯಿ ಇತ್ತು. ಈಗ ಕಚ್ಚಾ ತೈಲದ ಬೆಲೆ ೮೦ ಡಾಲರ್ ಇದ್ದರೂ ಮೋದಿ ಸರ್ಕಾರ ೧೦೦ ರೂಪಾಯಿ ದಾಟಿಸಿದ್ದು ಜನರನ್ನು ಕಷ್ಟಕ್ಕೆ ದೂಡಿದೆ ಎಂದರು.
ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ ಮಾತನಾಡಿ  ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕಟ್ಟಡ ಕಾರ್ಮಿಕರಿಗೆ ೩೦೦೦ ಕೊಡುತ್ತೇವೆ ಎಂದ ಸರ್ಕಾರ ಇನ್ನೂ ತನಕ ನೀಡಿಲ್ಲ. ಬರೀ ಘೋಷಣೆಗಳದ್ದೇ ಸರ್ಕಾರ ಎಂದು ದೂರಿದರು. 

ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಜಾನನ ನಾಯ್ಕ ಮಾತನಾಡಿ ಎಲ್ಲ ಕಡೆ ನಿರುದ್ಯೋಗ ತಾಂಡವವಾಡುತ್ತಿದೆ ಯುವ ಜನತೆಗೆ ದಿಕ್ಕೇ ತೋಚದಂತಾಗಿದೆ. ಕರೊನಾದಿಂದ ಜನ ತೀವ್ರ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇನ್ನೂವರೆಗೂ ಸಾರ್ವತ್ರಿಕವಾಗಿ ವ್ಯಾಕ್ಸಿನ್ ನೀಡಲು ಬಿಜೆಪಿ ಸರ್ಕಾರಗಳು ವಿಫಲವಾಗಿವೆ ಎಂದರು.
ಉದ್ಯಮಿ ದೀಪಕ ನಾಯ್ಕ ಹಳದಿಪುರ ಮಾತನಾಡಿ ಬಿಜೆಪಿ ಸರ್ಕಾರಗಳಿಂದ ಕೋಮು ಸೌಹಾರ್ದ ಕೆಡಿಸಿದ್ದೆ ಸಾಧನೆ. ಈ ಸರ್ಕಾರಗಳನ್ನು ಜನ ಕೆಳಗಿಳಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ನವೀನ ನಾಯ್ಕ, ಗಿರೀಶ ಗೌಡ, ಕಮಲಾಕರ ಮುಕ್ರಿ, ಶಂಶಿರ್ ಖಾನ್, ರಾಮಚಂದ್ರ ನಾಯ್ಕ, ನಾಗವೇಣಿ ಗೌಡ ಮತ್ತು ಶ್ರೀನಾಥ್ ಶೆಟ್ಟಿ, ಸುಬ್ರಹ್ಮಣ್ಯ ಹೆಗಡೆ, ಸುರೇಶ ಮೇಸ್ತಾ, ಎಲ್ ಎನ್ ಭಟ್ಟ, ಅರುಣ ನಾಯ್ಕ, ಅಜಿತ್ ನಾಯ್ಕ ನವಿಲಗೊಣ, ವಿನಾಯಕ ನಾಯ್ಕ, ಪಾಂಡು ಹರಿಕಾಂತ, ಶ್ರೀಪಾದ ಗೌಡ, ಹುಲಿಯಣ್ಣ ಗೌಡ, ಗಣಪತಿ ಗೌಡ, ರಿಯಾಜ್ ಶೇಖ್, ನಾಗೇಶ ನಾಯ್ಕ, ರಾಜು ನಾಯ್ಕ, ಮಂಜು ಮುಕ್ರಿ, ಜಗದೀಶ ನಾಯ್ಕ ಮುಂತಾದ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

error: