May 3, 2024

Bhavana Tv

Its Your Channel

ಸೂಳೆಮುರ್ಕಿ ಕ್ರಾಸ್ ಹತ್ತಿರ ಆಕ್ಸೆಲ್ ಕಟ್ ಆಗಿ ರಸ್ತೆಯಲ್ಲಿ ಅಡ್ಡನಿಂತ ಲಾರಿ : ಲಾರಿ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಹೊನ್ನಾವರ ಪೊಲೀಸರು.

ಹೊನ್ನಾವರ : ತಾಲೂಕಿನ ಗೇರುಸೊಪ್ಪ ಹತ್ತಿರ ಸೂಳೆಮುರ್ಕಿ ಕ್ರಾಸ್ ಹತ್ತಿರ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೬೯ ರಲ್ಲಿ ಇಳಿಜಾರಿನಿಂದ ಕೂಡಿದ ಅಪಾಯಕಾರಿ ತಿರುವಿನಲ್ಲಿ ಭಾರೀ ಸರಕು ಸಾಗಾಣಿಕೆಯ ಲೋಡ್ ಲಾರಿಯ ಆಕ್ಸೆಲ್ ಕಟ್ ಆಗಿ ಪ್ರಪಾತಕ್ಕೆ ಬೀಳುವ ಸ್ಥಿತಿಯಲ್ಲಿ ರಸ್ತೆಯಲ್ಲಿತ್ತು. ಲಾರಿ ಅಡ್ಡವಾಗಿ ನಿಂತಿದ್ದರಿAದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಬೇರೆ ಆಕ್ಸೆಲ್ ತರಿಸಿ ಮೆಕ್ಯಾನಿಕ್ ಕರೆಸಿ ವಾಹನ ದುರಸ್ಥಿಪಡಿಸಿ ಸುರಕ್ಷಿತವಾಗಿ ಲಾರಿಯನ್ನು ಸ್ಥಳಾಂತರಿಸಿ ರಸ್ತೆ ಸಂಚಾರವನ್ನು ಹೊನ್ನಾವರ ಸಿಪಿಐ ಶ್ರೀಧರ ಎಸ್. ಆರ್. ರವರ ಮಾರ್ಗದರ್ಶನದಲ್ಲಿ ರಾತ್ರಿಯೇ ಸುಗಮಗೊಳಿಸಿಕೊಟ್ಟಿದ್ದಾರೆ.

ದಟ್ಟ ಅರಣ್ಯದ ಗಾಟಿನಲ್ಲಿ ಲಾರಿ ಅಡ್ಡವಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿ ನಿಂತಿದ್ದರಿAದ ಮುಂದೆ ಸಾಗಲಾಗದ ನೂರಾರು ವಾಹನಗಳ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಗೇರುಸೊಪ್ಪದ ಬಂಗಾರುಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದ ವತಿಯಿಂದ ಉಚಿತ ಊಟವನ್ನು ಒದಗಿಸಿದೆ. ಹೊನ್ನಾವರ ಪೋಲೀಸರ ಈ ತುರ್ತು ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

error: