ಹೊನ್ನಾವರ: 15 ನೇ ಶರಾವತಿ ಉತ್ಸವ ದಿನಾಂಕ 25/12/2021 ರಂದು ಹೊನ್ನಾವರ ಸಂತೇಗುಳಿಯ ಮಹಾಸತಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶರಾವತಿ ಸಾಂಸ್ಕçತಿಕ ವೇದಿಕೆ ಹೊನ್ನಾವರ ಇದರ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಹೊನ್ನಾವರ ಖಾಸಗಿ ಹೊಟೇಲ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ಸಮಾನ ಮನಸ್ಕರೊಳಗೊಂಡ ಪ್ರಾರಂಭಗೊAಡ ಈ ವೇದಿಕೆ ಈ ವರ್ಷದ 15 ನೇ ಉತ್ಸವವನ್ನು ಸಂತೆಗುಳಿಯಲ್ಲಿ ನಡೆಸಲಿದ್ದೇವೆ.
ಆ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜಾಧ್ಯಕ್ಷರಾದ ಮಹೇಶ ಜೋಶಿಯವರು ಆಗಮಿಸಲಿದ್ದು ಅಂದು ಅವರಿಗೆ ನಾಗರಿಕ ಸನ್ಮಾನ ನಡೆಯಲಿದೆ. ಕಾಯಕ್ರಮದ ಅಧ್ಯಕ್ಷತೆಯನ್ನು ಸಂಕಲ್ಪ ಅಧ್ಯಕ್ಷರಾದ ಪ್ರಮೋದ ಹೆಗಡೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಎಮ್ ಕೆ ಭಾಸ್ಕರ್ ರಾವ್ , ಕೆಡಿಸಿಸಿ ಬ್ಯಾಂಕ್ ನಿರ್ದೆಶಕ ಶಿವಾನಂದ ಹೆಗಡೆ ಕಡತೋಕ , ಹೊಸಾಕುಳಿ ಗ್ರಾಮ ಪಂಚಾಯತ ಅಧ್ಯಕ್ಷೆ ನಾಗರತ್ನಾ ನಾಯ್ಕ ಹಾಗೂ ಉಪಾಧ್ಯಕ್ಷರಾದ ಕಿರಣ ಹೆಗಡೆ ಉಪಸ್ಥಿತರಿರಲಿದ್ದಾರೆ.
ಜೀವಜಲ ಕರ್ಯಪಡೆ ಶಿರಸಿ ಇದರ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ , ಇಂಟರ್ ನ್ಯಾಶನಲ್ ಸೊಸೈಟಿ ಫಾರ್ ಸೆಕ್ಸುವಲ್ ಮೆಡಿಸಿನ್ ಇವರ ಜಾಗತಿಕ ಮಟ್ಟದ ಪ್ರಶಸ್ತಿ ಪುರಸ್ಕçತ ವೈದ್ಯ ದಂಪತಿಗಳಾದ ಡಾ. ಗಜಾನನ ಭಟ್ಟ ನವಿಲಗೋಣ, ಡಾ ಅನುರಾಧಾ ಶಾಸ್ತಿç ನವಿಲಗೋಣ, ಹಾಗೂ ನಿವೃತ್ತ ಸೈನಿಕ ನಾರಾಯಣ ವಿ ಗಾವಡಿ ಇವರನ್ನು ಸನ್ಮಾನಿಸಲಾಗುವುದು..
ಶ್ರೀ ಗಣೇಶ ದೇಸಾಯಿ ಬೆಂಗಳೂರು ಹಾಗೂ ತಂಡದವರಿAದ ಭಾವಸಂಗೀತ, ರಾತ್ರಿ 9 ಗಂಟೆಗೆ ಬೇಡರ ಕಣ್ಣಪ್ಪ ಯಕ್ಷಗಾನದ ಆಯ್ದ ಹಾಸ್ಯ ಸನ್ನಿವೇಶ ಹಾಗೂ ಕಾರ್ತಿಕ ಕಣ್ಣೆ ಹಾಗೂ ದರ್ಶನ ಭಟ್ಟ ಮುಗ್ವಾ ಇವರಿಂದ ನಾಟ್ಯ ವೈಭವ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಶಂಭು ಹೆಗಡೆ ಸಂತನ್ , ಪಿ.ಎಸ್ ಭಟ್ಟ, ಪ್ರೋ ಗೋಪಾಲಕೃಷ್ಣ ಹೆಗಡೆ ಕಲಭಾಗ, ತಿಮ್ಮಣ್ಣ ಹೆಗಡೆ ಹಾಗೂ ಎಲ್ ಎ ಭಟ್ಟ ಉಪಸ್ಥಿತರಿದ್ದರು .
ತಾಯಿ ಶರಾವತಿ ಉತ್ಸವ ನಮ್ಮ ನಿಮ್ಮೆಲ್ಲರ ಹಬ್ಬ ಈ ಉತ್ಸವಕ್ಕೆ ಬಹುಸಂಖ್ಯೆಯಲ್ಲಿ ಬನ್ನಿ ಎಂದು ತಿಳಿಸಿದರು.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್