ಹೊನ್ನಾವರ: ಕರ್ನಾಟಕ ರತ್ನ ಪುನೀತ ರಾಜಕುಮಾರರವರು ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ ರಾಜಾದ್ಯಂತ ಬಿಡುಗಡೆಯಾಗಿದ್ದು ಹೊನ್ನಾವರದಲ್ಲಿ ಪುನೀತ ಅಭಿಮಾನಿಗಳು ಹಾಲಾಭಿಷೇಕ,ಸಿಹಿ ವಿತರಣೆ ಹಾಗೂ ಕೇಕ್ ಕತ್ತರಿಸುವುದರ ಮೂಲಕ ಅಭಿಮಾನ ಮೇರೆದರು,
ಬೆಳಿಗ್ಗೆಯಿಂದಲೆ ಆಗಮಿಸಿದ ಪುನೀತ ಅಭಿಮಾನಿಗಳು ಪದ್ಮಾಂಜಲಿ ಟಾಕೀಸ್ನಲ್ಲಿ ಎತ್ತರದ ಕಟೌಟಗಳನ್ನು ಹಾಕಲಾಗಿತ್ತು. ಆರಂಭದಲ್ಲಿ ಪುನೀತ ಕಟೌಟಗಳಿಗೆ ಹಾಲಿನಿಂದ ಅಭಿಷೇಕ ಮಾಡಲಾಯಿತು, ಆನಂತರ ಪುನೀತ ಹುಟ್ಟು ಹಬ್ಬದ ನಿಮಿತ್ತ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದರು. ಬಂದ ಎಲ್ಲರಿಗೂ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭಾವನಾ ಟಿವಿಯೊಂದಿಗೆ ಮಾತನಾಡಿದ ಶ್ರೀರಾಮ ಜಾದುಗಾರರವರು ಪುನೀತ ರಾಜಕುಮರರವರು ಅಭಿಮಾನಿಗಳ ಆರಾಧದಯ ದೈವ, ಅವರು ಇಲ್ಲದ್ದರಿವುದು ತಮಗೆ ತುಂಬಾ ನೋವುಂಟುಮಾಡಿದೆ, ಆದರೆ ಅವರು ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲಸಿರುತ್ತಾರೆ, ಅವರ ಹುಟ್ಟು ಹಬ್ಬದ ನಿಮಿತ್ತ ಬಿಡುಗಡೆಗೊಂಡ ಸಿನೀಮಾದ ಅಭಿಮಾನಕ್ಕಾಗಿ ಹಾಲ ಅಭಿಷೇಕ , ಕೇಕ್ ಕತ್ತರಸಿ ಹಾಗೂ ಸಿಹಿ ಹಂಚಿದ್ದೇವೆ ಎಂದರು.
ಸಿನೇಮಾ ಆರಂಭವಾಗುತ್ತಿದ್ದoತೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಆರಂಭದಲ್ಲಿ ಕೊನೆಯಲ್ಲಿ ಪಟಾಕಿ ಸುಡಿಸಿ ಕುಣಿದು ಕುಪ್ಪಳಿಸಿದರು.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು