ಹೊನ್ನಾವರದ ಮಹಿಳಾ ವೈದ್ಯ ಘಟಕ ಐಎಮ್ಎ, ಅಧ್ಯಕ್ಷೆ ಡಾ.ಮಂಜುಳಾ ಯುವರಾಜ್ ಅವರ ಮುಂದಾಳತ್ವದಲ್ಲಿ, ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ 20 ರಂದು ಸಂಜೆ 03.30ಕ್ಕೆ ಇಲ್ಲಿನ ರೋಟರಿ ಪಾರ್ಕ ಭವನದಲ್ಲಿ ಆಚರಿಸಲಾಯಿತು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಮೋಘ ಸೇವೆ ಸಲ್ಲಿಸಿದ ಎಂಟು ಮಹಿಳಾಮಣಿಗಳನ್ನು ಗೌರವಿಸಲಾಯಿತು. .ಡಾ.ಪ್ರತಿಭಾ ಬಳಕೂರ್,ವೈದ್ಯ ವೃಂದದ ಪರವಾಗಿ. ಡಾ.ಅನುಪಮಾ ಎಚ್.ಎಸ್,ಸಾಹಿತ್ಯ ಮತ್ತು ಸಾಮಾಜಿಕ ಕಾರ್ಯಕ್ಕಾಗಿ. ಶ್ರೀಮತಿ ತಾರಾ ಭಟ್,ಸಂಗೀತ ಕ್ಷೇತ ಶ್ರೀಮತಿ ಶಾರದಾ ಶರ್ಮಾ,ಶಿಕ್ಷಣ ಕ್ಷೇತ್ರ. ಶ್ರೀಮತಿ ಶರಾವತಿ ಹೆಗಡೆ,ನ್ಯಾಯಾಂಗ ಕ್ಷೇತ್ರ ಶ್ರೀಮತಿ ಛಾಯಾ ನಾಯ್ಕ,ಯೋಗಾಭ್ಯಾಸ. ಶ್ರೀಮತಿ ಮಾಲಾ ನಾಯ್ಕ,ಶುಶ್ರೂಷೆ ಮತ್ತು ಪಂದ್ಯಾವಳಿ. ಶ್ರೀಮತಿ ಪ್ರೆಸಿಲ್ಲಾ, ಗ್ರಹಸೇವಕಿ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು
ಅತಿಥಿ ಉಪನ್ಯಾಸಕರಾಗಿ ಶ್ರೀಮತಿ ಶರಾವತಿ ಹೆಗಡೆ ಆಗಮಿಸಿ ಹೊಸ ಕಾನೂನಿನಡಿಯಲ್ಲಿ ಮಹಿಳಾ ಹಕ್ಕುಗಳು ಮತ್ತು ಶಿಶುನಿಂದನೆಯ ಮೇಲೆ ಮಾತನಾಡಿದರು.
ಡಾ.ಅನುಪಮಾರವರು ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ಮಾತನಾಡಿದರು.
ಡಾ.ಮಂಜುಳಾ ಯುವರಾಜ್ ಎಲ್ಲರನ್ನು ಸ್ವಾಗತಿಸಿ ಲೈಂಗಿಕ ಸಮಾನತೆಯಲ್ಲಿ ಹೊಸ ತಿರುವುಗಳು ವಿಷಯದ ಕುರಿತು ಮಾತನಾಡಿದರು.
ಐಎಮ್ಎ ಅಧ್ಯಕ್ಷ ಡಾ.ವಿಶಾಲ್.ವಿ.ಅಧ್ಯಕ್ಷೀಯ ನುಡಿಗಳನ್ನಾಡಿದರು.
ಮಹಿಳಾ ವೈದ್ಯಕೂಟದ ಕಾರ್ಯದರ್ಶಿ ಡಾ.ವೈಶಾಲಿ ನಾಯ್ಕ ಅಭಿನಂದಿಸಿದರು. .ಶ್ರೀಮತಿ ಜ್ಯೋತಿ ಲೋಪೆಸ್ ನಿರೂಪಿಸಿದರು.
ಕಾರ್ಯಕ್ರಮಗಳಲ್ಲಿ ವರ್ಣಚಿತ್ರಗಳ ಪ್ರದರ್ಶನ-ವೈದ್ಯರುಗಳಿಂದ. ಕರಕುಶಲ ಕಲೆ ಮತ್ತು ಕಲೆಗಳ ಪ್ರದರ್ಶನ. ವೈದ್ಯರು ಮತ್ತುಶಿಕ್ಷಕ ವೃಂದದಿಂದ ನರ್ತನ, ಯೋಗ ನರ್ತನ,ಗಾಯನ ಕಾರ್ಯಕ್ರಮಗಳು ನಡೆದವು.
More Stories
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು
ಕಾಡಿನಲ್ಲಿ ವಾಸಮಾಡಬೇಕಾದ ಕಡವೆ ನಾಡಿನಲ್ಲಿ ಪ್ರತ್ಯಕ್ಷ
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ