April 28, 2024

Bhavana Tv

Its Your Channel

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ

ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಸಾಸನ ಪಡೆಯುತ್ತಿರುವ, ತಾಲೂಕಿನ 12 ಜನ ಕಡು ಬಡವರಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ವಾಸಂತಿ ಕಾರ್ಯಕ್ರಮದ ಉದ್ದೇಶದ ಕುರಿತು ಮಾತನಾಡಿ ಪೂಜ್ಯ ದಂಪತಿಗಳು ಅರ್ಹ ಫಲಾನುಭವಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಾತ್ಸಲ್ಯ ಕಿಟ್ ಕಳುಹಿಸಿ ಕೊಟ್ಟಿದ್ದಾರೆ. ನಾವಿಂದು ಫಲಾನುಭವಿಗಳ ಮನೆಗೆ ಹೋಗಿ ತಲುಪಿಸುತ್ತಿದ್ದೇವೆ ಎಂದರು.
ಫಲಾನುಭವಿಗಳಲ್ಲಿ ಒಬ್ಬರಾದ ಕೆಂಚಗಾರ್ ಒಕ್ಕೂಟದ ಸದಸ್ಯೆ ಮುಟ್ಟ ದ ಮಹಾಲಕ್ಷ್ಮೀ ಗಂಗಾಧರ್ ಆಚಾರಿ ಮಾತನಾಡಿ ನಮ್ಮ ನಿರ್ಗತಿಕ ಪರಿಸ್ಥಿತಿಯನ್ನು ನೋಡಿದ ಅಂದಿನ ಸೇವಾಪ್ರತಿನಿಧಿ ಭಾಗೀರತಿ ಚಿಕ್ಕನಕೋಡ್ ಅವರು, ನನ್ನನ್ನು ಧರ್ಮಸ್ಥಳ ಸಂಘಕ್ಕೆ ಸೇರಿಸಿದರು. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಅಂದಿನಿAದ ನನ್ನ ಗಂಡನ ಆರೋಗ್ಯವೂ ಸುಧಾರಿಸಿದ್ದು, ಮತ್ತೆ ಆಸ್ಪತ್ರೆಯ ಮೆಟ್ಟಿಲನ್ನು ಹತ್ತಲಿಲ್ಲ. ಮಕ್ಕಳಿಬ್ಬರು ಚೆನ್ನಾಗಿ ಹೈ ಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಓದಿಗೆ ಅನುಕೂಲಕರವಾಗಿ, ಈಗಿನ ಸೇವಾಪ್ರತಿನಿಧಿ ರಮೇಶ್ ಅವರು ಯೋಜನೆಯಿಂದ ಸೋಲಾರ್ ಲೈಟ್ ಹಾಕಿಸಿಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ ವಾರದ ಕಂತಿನಲ್ಲಿ ಹಣ ಕಟ್ಟುತ್ತಿದ್ದೇನೆ. ಎಂದರು.
ಈ ಸಂದರ್ಭದಲ್ಲಿ ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ಜ್ಞಾನ ವಿಕಾಸ ಸಮನ್ವಯಧಿಕಾರಿ ಅಮೃತಾ, ತಾಲೂಕ ವ್ಯಾಪ್ತಿಯ ಜ್ಞಾನ ವಿಕಾಸ ಸಮನ್ವಯಧಿಕಾರಿ ಯಮುನಾ, ಹಡಿನಬಾಳ ವಲಯ ಮೇಲ್ವಿಚಾರಕ ರಾಜು, ಕೆಂಚಗಾರ್ ಒಕ್ಕೂಟದ ಸೇವಾಪ್ರತಿನಿಧಿ ರಮೇಶ್ ನಾಯ್ಕ್ ಹಾಗೂ ಒಕ್ಕೂಟದ ಕಾರ್ಯದರ್ಶಿ ನರಸಿಂಹ ಹರಡಸೆ ಮತ್ತಿತರರು ಉಪಸ್ಥಿತರಿದ್ದರು.

error: