May 13, 2024

Bhavana Tv

Its Your Channel

60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಹೊನ್ನಾವರ ಸಾಲಕೊಡ್ ಹೊಸಮಾರ್ಗದ ಸೇತುವೆ

ಹೊನ್ನಾವರ ತಾಲ್ಲೂಕಿನ ಸಾಲಕೊಡ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಬೇಕಾದ ಹೊಸಮಾರ್ಗ ಸೇತುವೆಯನ್ನು ಶಾಸಕ ದಿನಕರ ಶೆಟ್ಟಿ ಸೋಮವಾರ ಸಂಜೆ ವೀಕ್ಷಿಸಿದರು.

ಶಾರದಾ ಶೆಟ್ಟಿ ಅವರು ಶಾಸಕರಿದ್ದ ಸಂದರ್ಭದಲ್ಲಿ ಶುರು ಮಾಡಿದ್ದ ಈ ಕಾಮಗಾರಿ ಸ್ಥಳೀಯರ ಕಾರಣದಿಂದ ಸ್ಥಗಿತಗೊಂಡಿತ್ತು. ದಿನಕರ ಶೆಟ್ಟಿ ಶಾಸಕರಾಗಿ ಬಂದ ಬಳಿಕ ಸಾಕಷ್ಟು ಬಾರಿ ಭೇಟಿ ನೀಡಿ ಜಮೀನು ವ್ಯಾಜ್ಯ ಬಗೆಹರಿಸಲು ಪ್ರಯತ್ನಿಸಿದರೂ ಕೂಡ ಸೇತುವೆ ನಿರ್ಮಿಸಬೇಕಾದ ಕೊಳ್ಳವು ಖಾಸಗಿಯವರಿಗೆ ಸೇರಿದ್ದ ಕಾರಣ ಒಪ್ಪಿಗೆ ನೀಡಿರಲಿಲ್ಲ. ಆದರೆ ಕೆಲವು ತಿಂಗಳ ಹಿಂದೆ ಶಾಸಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೇತುವೆ ನಿರ್ಮಾಣಕ್ಕೆ ಒಪ್ಪಿಸಿದ್ದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂದುಕೊAಡAತೆ ಆಗಿದ್ದರೆ ಈಗಾಗಲೇ ಈ ಸೇತುವೆಯ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿಯಬೇಕಿತ್ತು. ನೀತಿ ಸಂಹಿತೆಯ ಕಾರಣದಿಂದ ವಿಳಂಬವಾಗಿದೆ. ಇದರ ಪಕ್ಕದ ಹೊಳೆಗೆ ನನ್ನ ಅವಧಿಯಲ್ಲೇ ಒಂದು ಕೋಟಿ ರೂ. ವೆಚ್ಚದ ಸೇತುವೆ ನಿರ್ಮಿಸಿಕೊಡಲಾಗಿದೆ. ಈ ಸೇತುವೆ ನಿರ್ಮಾಣಕ್ಕೆ ಮಾತ್ರ ಜಾಗದ ಸಮಸ್ಯೆಯಿಂದ ಹಿನ್ನಡೆ ಉಂಟಾಗಿತ್ತು. ಅಂತೂ ಈಗ ಜಮೀನು ವ್ಯಾಜ್ಯ ಮುಗಿದಿದ್ದು ಸರ್ಕಾರ ಕೂಡ ಪ್ರಸ್ತಾವನೆ ಸ್ವೀಕರಿಸಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಪಂಚಾಯತ್ ರಾಜ್ ಇಲಾಖೆಯಿಂದ ಈ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ಮುಖಂಡರಾದ ಸುಬ್ರಹ್ಮಣ್ಯ ಶಾಸ್ತ್ರಿ, ಎಂ.ಜಿ.ಭಟ್ಟ, ಎಂ.ಎಸ್.ಹೆಗಡೆ, ಎಂ.ಎಸ್.ಹೆಗಡೆ ಕೆರೇಕೋಣ, ಎನ್.ಎಸ್ ಹೆಗಡೆ, ಆರ್. ಎನ್.ಹೆಗಡೆ, ಗಣಪತಿ ಭಟ್ಟ, ಬಾಲು ನಾಯ್ಕ ಹಾಗೂ ಊರ ನಾಗರಿಕರು ಇದ್ದರು.

error: