ಹೊನ್ನಾವರ: ಹತ್ತಾರು ವರ್ಷಗಳಿಂದ ನಗರ-ಪಟ್ಟಣಗಳಲ್ಲಿ ಜನತೆಗೆ ಮೂಲಭೂತ ನಾಗರಿಕ ಸೌಲಭ್ಯಗಳಾದ ಸ್ವಚ್ಚತೆ, ನೀರು ಸರಬರಾಜು, ಬೀದಿ ದೀಪಗಳ ನಿರ್ವಹಣೆಗಾಗಿ ದುಡಿಯುತ್ತಿರುವ ಮುನಿಸಿಪಲ್ ಕಾರ್ಮಿಕರು ತಮ್ಮ ಸೇವೆಗಳ ಖಾಯಂಮಾತಿಗೆ ಜುಲೈ 1, 2022 ರಿಂದ ನಡೆಸುತ್ತಿರುವ ಮುಷ್ಕರಕ್ಕೆ ಸಿ.ಪಿ.ಐ(ಎಂ) ಕರ್ನಾಟಕ ರಾಜ್ಯ ಸಮಿತಿ ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರರವರು ಆದುನಿಕ ತಾಂತ್ರಿಕತೆಯ ನಡುವೆಯು ಕಳೆದ 10 ವರ್ಷಗಳಲ್ಲಿ ಮ್ಯಾನ್ ಹೋಲ್ ಮತ್ತು ಮಲದ ಗುಂಡಿಗಳಲ್ಲಿ ಬಿದ್ದು 80ಕ್ಕೂ ಹೆಚ್ಚು ಜನ ಪೌರಕಾರ್ಮಿಕರು ತಮ್ಮ ಅಮೂಲ್ಯವಾದ ಜೀವಗಳನ್ನು ಕಳೆದುಕೊಂಡಿರುವುದು ನಾಗರೀಕ ಸಮಾಜ – ಮತ್ತು ಸರ್ಕಾರಗಳು ಗಂಭಿರವಾಗಿ ಪರಿಗಣಿಸಬೇಕಾಗಿದೆ ಮತ್ತು ಇದಕ್ಕೆ ಅಂತಿಮ ಹಾಡಬೇಕಾಗಿದೆ ಎಂದು ತಿಳಿಸಿದ ಅವರು ಸಿಪಿಐ(ಎಂ) ತನ್ನ ಕಳವಳ-ಕಾಳಜಿಯನ್ನು ವ್ಯಕ್ತಪಡಿಸುತ್ತದೆ.
ಘನತೆಯಿಂದ ಬದುಕಲು ಬೇಕಾದ ವೇತನ, ಅತ್ಯಗತ್ಯವಾದ ಸುರಕ್ಷಾ ಸಲಕರಣೆಗಳು, ಕಾರ್ಮಿಕರ ಕಾನೂನುಗಳ ಅನ್ವಯ 8 ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ, ವಾರದ ರಜೆ, ಸಾಂದರ್ಭಿಕ ರಜೆ, ಗಳಿಕೆ ರಜೆ, ಸಂಬಳದ ಚೀಟಿ, ಗುರುತಿನ ಚೀಟಿ, ಪಿ,ಎಫ್./ಇ.ಎಸ್.ಐ. ಪಾವತಿಗಳಲ್ಲಿ ವಂಚನೆ, ಕುಡಿಯುವ ನೀರು, ಶೌಚಾಲಯ ಇತ್ಯಾದಿ ಇಲ್ಲದೆ ದಾರುಣವಾಗಿ ಬದುಕುವಂತಹ ಸ್ಥಿತಿ ಪೌರಕಾರ್ಮಿಕರದಾಗಿದೆ. ನಿರಂತರವಾಗಿ ಹಲವು ಸಂಘಟನೆಗಳು ಹತ್ತಾರು ವರ್ಷಗಳಿಂದ ಖಾಯಮಾತಿ ನಡೆಸುತ್ತಿರುವ ಹೋರಾಟದ ಸಮಯದಲ್ಲಿ ಸರ್ಕಾರ ಖಾಯಂ ಮಾಡುವ ಭರವಸೆ ಮಾತ್ರ ಅಲ್ಲೇ ನಿಂತುಹೋಗಿದೆ. ಬದಲಿಗೆ ನೇರ ನೇಮಕಾತಿ, ನೇರ ಪಾವತಿ ಎಂದು ಹಾದಿ ತಪ್ಪಿಸಲಾಗುತ್ತಿದೆ. ಅಲ್ಲದೆ ಕಾರ್ಮಿಕರ ಒಗ್ಗಟ್ಟನ್ನು ಒಡೆಯಲಾಗುತ್ತಿದೆ. ಮುಷ್ಕರ ತೆರಳಿರುವ ಕಾರ್ಮಿಕರ ಐಕ್ಯತೆಯನ್ನು ಒಡೆಯಲು ಸರ್ಕಾರ 4500 ಜನ ಪೌರ ಕಾರ್ಮಿಕರನ್ನು ಮಾತ್ರ ಖಾಯಂ ಮಾಡುವುದಾಗಿ ಹೇಳಿರುವ ಕ್ರಮ ಸರಿಯಾದುದ್ದಲ್ಲ.
ನಾಗರಿಕರ ಹಿತ ದೃಷ್ಟಿಯಿಂದ ಮುನಿಸಿಪಲ್ ಕಾರ್ಮಿಕರ ನ್ಯಾಯ ಸಮ್ಮತ ಹಕ್ಕೊತ್ತಾಯ ಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದೆ ಎಂದಿದ್ದಾರೆ.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ
More Stories
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು
ಕಾಡಿನಲ್ಲಿ ವಾಸಮಾಡಬೇಕಾದ ಕಡವೆ ನಾಡಿನಲ್ಲಿ ಪ್ರತ್ಯಕ್ಷ
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ