April 29, 2024

Bhavana Tv

Its Your Channel

ಶ್ರೀ ಉಮಾಂಬಾ ಮಹಾಗಣಪತಿ ಹಾಗೂ ಉಗ್ರ ನರಸಿಂಹ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕೆ ಶಿಲಾನ್ಯಾಸ

ಹೊನ್ನಾವರ ತಾಲೂಕಿನ ಅಪ್ಸರಕೊಂಡ ಶ್ರೀ ಉಮಾಂಬಾ ಮಹಾಗಣಪತಿ ಹಾಗೂ ಉಗ್ರ ನರಸಿಂಹ ದೇವಸ್ಥಾನಕ್ಕೆ ಭಟ್ಕಳ ಶಾಸಕ ಸುನೀಲ ನಾಯ್ಕರವರು ವೈಯಕ್ತಿಕ ಕಾಣಿಕೆಯಾಗಿ ನೀಡಲಿರುವ ಮಹಾದ್ವಾರ ನಿರ್ಮಾಣಕ್ಕೆ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರು ಶಿಲಾನ್ಯಾಸವನ್ನು ಮಂಗಳವಾರ ಸಂಜೆಯ ವೇಳೆಗೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ ಮಾತನಾಡಿ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಸರ್ಕಾರದ ಅನುದಾನದ ಹೊರತಾಗಿ ನನ್ನ ಕೈಲಾದ ವೈಯಕ್ತಿಕ ಸೇವೆ ಹೀಗೆ ಮುಂದುವರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ್ ಬಂಡಾರಿ, ಮಾಜಿ ತಾ. ಪಂ. ಅಧ್ಯಕ್ಷ ಶಂಭು ಬೈಲಾರ್, ಮಾವಿನಕುರ್ವ ಗ್ರಾ. ಪಂ. ಅಧ್ಯಕ್ಷ ಜಿ. ಜಿ. ಶಂಕರ, ನಗರಬಸ್ತಿಕೇರಿ ಗ್ರಾ. ಪಂ. ಅಧ್ಯಕ್ಷ ಮಂಜುನಾಥ ನಾಯ್ಕ, ಹೆರಂಗಡಿ ಗ್ರಾ. ಪಂ. ಅಧ್ಯಕ್ಷ ಪ್ರಮೋದ ನಾಯ್ಕ, ಕೆಳಗಿನೂರು ಗ್ರಾ. ಪಂ. ಸದಸ್ಯ ಶಿವಾನಂದ ಗೌಡ, ಸುರೇಶ ಗೌಡ ಅಪ್ಸರಕೊಂಡ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು, ಭಕ್ತಾದಿಗಳು ಇದ್ದರು.

error: