ಹೊನ್ನಾವರದಲ್ಲಿ ನಿರಂತರ ಮಳೆ ಸುರಿದ ಪರಿಣಾಮವಾಗಿ ನದಿ ತೀರದ ಗ್ರಾಮಗಳು ಜಲಾವೃತವಾಗಿ ಅಲ್ಲಿರುವ ಜನರಿಗೆ ಸುರಕ್ಷಿತವಾದ ಕಾಳಜಿ ಕೆಂದ್ರಗಳ ವ್ಯವಸ್ಥೆಯನ್ನು ತಾಲೂಕಾಡಳಿತ ಮಾಡಿದೆ. ಈ ಸಂದರ್ಭದಲ್ಲಿ ನೆರೆ ಸಂತ್ರಸ್ಥರಿಗಾಗಿ ತೆರೆಯಲಾದ ಕಾಳಜಿ ಕೆಂದ್ರಗಳಾದ ಸ.ಹಿ.ಪ್ರಾ ಶಾಲೆ ಗುಂಡಿಬೈಲ್, ಅಂಗನವಾಡಿ ಕೆಂದ್ರ, ಹೆಬೈಲ್ ಗುಂಡಬಾಳ, ಮತ್ತು ಸ.ಹಿ.ಪ್ರಾ ಶಾಲೆ ಮಾಡಗೇರಿ ಇಲ್ಲಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಬೇಟಿ ನೀಡಿ ೧೫೦ ಕ್ಕೂ ಹೆಚ್ಚು ನೆರೆ ಸಂತ್ರಸ್ಥರಿಗೆ ಕುಡಿಯು ನೀರಿನ ಬಾಟಲಿಗಳನ್ನು ಹಾಗೂ ಬಿಸ್ಕಿಟ್ ಪೊಟ್ಟಣಗಳನ್ನು ನೀಡಿ ಸಂತ್ರಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬುವ ಕಾರ್ಯವನ್ನು ಸಂಘದ ಪರವಾಗಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಜಕುಮಾರ ಟಿ. ನಾಯ್ಕ ರಾಜ್ಯ ಪರಿಷತ್ ಸದಸ್ಯರಾದ ಎಂ.ಜಿ.ನಾಯ್ಕ, ಉಪಾಧ್ಯಕ್ಷರಾದ ಚಂದ್ರಶೇಖರ ಕಳಸ, ಕಾರ್ಯದರ್ಶಿಗಳಾದ ಅಣ್ಣಪ್ಪ ಮುಕ್ರಿ, ಸ್ಥಳದಲ್ಲಿ ಹಾಜರಿದ್ದರು. ನೌಕರ ಸಂಘದ ಈ ಕಾರ್ಯವನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪ್ರಶಂಸಿಸಿದರು.
More Stories
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು
ಕಾಡಿನಲ್ಲಿ ವಾಸಮಾಡಬೇಕಾದ ಕಡವೆ ನಾಡಿನಲ್ಲಿ ಪ್ರತ್ಯಕ್ಷ
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ