ಹೊನ್ನಾವರ:- ಭಾರತ ಸೇವಾದಳದ ಹೊನ್ನಾವರ ತಾಲೂಕಾ ಸಮಿತಿಯಿಂದ, ಅಕಾಲಿಕ ನಿಧನರಾದ ಭಾರತ ಸೇವಾದಳದ ಜಿಲ್ಲಾ ಸಮಿತಿಯ ಸದಸ್ಯರಾದ ದಿ.ಉದಯ ನಾಯ್ಕ ಮೂಡ್ಕಣಿಯವರಿಗೆ ಶೃದ್ಧಾಂಜಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್.ನಾಯ್ಕರವರು ಮಾತನಾಡಿ,ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಉದಯ ನಾಯ್ಕರವರು,ಒಬ್ಬ ಉತ್ತಮ ನಾಟಕ ಕಲಾವಿದರಾಗಿಯು ಜನಪ್ರಿಯರಾಗಿದ್ದರು, ಗಣೇಶೋತ್ಸವದ ಅಂಗವಾಗಿ ನಡೆದ ನಾಟಕದಲ್ಲಿ ಮಿಂಚಿ,ಜೀವನದ ನಾಟಕಕ್ಕೆ ಅಂತ್ಯ ಹಾಡಿದ್ದು ದುರಂತಮಯ ಘಟನೆಯಾಗಿದೆ. ಅಪಾರ ಜನರ ಪ್ರೀತಿಗೆ ಪಾತ್ರರಾದ ಇವರು ಭಾರತ ಸೇವಾದಳದ ತಾಲೂಕಾ ಹಾಗೂ ಜಿಲ್ಲಾ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇವರ ಅಗಲುವಿಕೆಯು ನಮ್ಮ ತಾಲೂಕಿನ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟವಾಗಿದೆ.ಇವರ ಕುಟುಂಬದ ವರಿಗೆ ಇವರ ಅಗಲುವಿಕೆ ನೋವನ್ನು ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.
ತಾಲೂಕಾ ಭಾರತ ಸೇವಾದಳದ ಅಧ್ಯಕ್ಷರಾದ ವಾಮನ ನಾಯ್ಕ ಮಾತನಾಡಿ ಉದಯ ನಾಯ್ಕರವರು ಕೇವಲ ವ್ಯಕ್ತಿಯಾಗಿರದೆ ಭಾರತ ಸೇವಾದಳದ ಶಕ್ತಿಯಾಗಿದ್ದರು.ಇವರ ನೇತೃತ್ವದಲ್ಲಿ ಭಾರತ ಸೇವಾದಳದ ತಾಲೂಕಾ ಸಮಿತಿಯು ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು.ಅಲ್ಲದೆ ಇವರು ಕೇವಲ ಸೇವಾದಳಕ್ಕೆ ಮಾತ್ರ ಸೀಮಿತವಾಗಿರದೇ, ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಯುವ ನಾಯಕರಾಗಿ ತಾಲೂಕಿನಲ್ಲಿ ಗುರುತಿಸಿಕೊಂಡ ಇವರು,ಭವಿಷ್ಯದಲ್ಲಿಇನ್ನೂ ಹಲವಾರು ಸೇವಾ ಚಟುವಟಿಕೆಗಳನ್ನು ನಿರ್ವಹಿಸುವ ಅಭಿಲಾಷೆ ಹೊಂದಿದ್ದರು ಎಂದು ಇವರ ಕುಟುಂಬದ ಸದಸ್ಯರಿಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ಭಗವಂತ ಕರುಣಿಸಲೆಂದು ಪ್ರಾರ್ಥಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಜಿ.ನಾಯ್ಕ ಮಾತನಾಡಿ ದಿ.ಉದಯ ನಾಯ್ಕರವರ ಸೇವೆಯನ್ನು ಸ್ಮರಿಸಿ ಶೃದ್ಧಾಂಜಲಿ ಸಲ್ಲಿಸಿದರು. ಉಪಸ್ಥಿತರಿದ್ದ ತಾಲೂಕಾ ಉಪಾಧ್ಯಕ್ಷರಾದ ಅಣ್ಣಪ್ಪ ಎಂ ನಾಯ್ಕ ಮಂಕಿ, ತಾಲೂಕಾ ಸಂಘಟಕರಾದ ಉದಯ ಆರ್.ನಾಯ್ಕ, ಕಾರ್ಯದರ್ಶಿ ಗಜಾನನ ನಾಯ್ಕ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಬಾಬು ನಾಯ್ಕ, ಜಿಲ್ಲಾ ಸಮಿತಿ ಸದಸ್ಯರಾದ ಕಲ್ಪನಾ ಹೆಗಡೆ ಮಾತನಾಡಿ ದಿವಂಗತರಿಗೆ ಶೃದ್ಧಾಂಜಲಿ ಸಲ್ಲಿಸಿದರು. ತಾಲೂಕು ಸಮಿತಿ ಸದಸ್ಯರಾದ ಮೋಹನ ನಾಯ್ಕ ಹೆರಾಳಿ, ಅಜೀವ ಸದಸ್ಯರಾದ ಗಜಾನನ ನಾಯ್ಕ, ಲಂಭೋದರ ನಾಯ್ಕ ಹಾಗೂ ಶಾಖಾ ನಾಯಕ ನಾಯಕಿಯರು ಹಾಜರಿದ್ದರು.
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು