May 2, 2024

Bhavana Tv

Its Your Channel

ಎಂ.ಪಿ.ಇ ಸೊಸೈಟಿಯ ಎಸ್. ಡಿ. ಎಮ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗುರುವಂದನೆ ಕಾರ್ಯಕ್ರಮ

  ಹೊನ್ನಾವರ:-     ದಿನಾಂಕ 05/09/22 ರಂದು   ಹೊನ್ನಾವರದ ಎಂ.ಪಿ.ಇ ಸೊಸೈಟಿಯ, ಎಸ್.ಡಿ.ಎಮ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಎಂ. ಎಚ್. ಭಟ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ತರವಾದದ್ದು ಎಂದು ತಿಳಿಸಿದರು. ಎಲ್ಲಾ ಉಪನ್ಯಾಸಕರುಗಳು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರುವಿನ ಪಾತ್ರದ ಕುರಿತು ಮಾತನಾಡಿದರು ಹಾಗೂ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾದ ಶ್ರೀಯುತ ವಿನಾಯಕ ಭಟ್ ಇವರು ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವನ್ನು ನೀಡುವ ಬಹುಮುಖ್ಯ ಪಾತ್ರ ಶಿಕ್ಷಕರದ್ದು ಎಂದು ತಿಳಿಸಿದರು. ನಂತರ ಶ್ರೀಯುತ ಡಾ. ರಾಜು ಮಾಳಗಿಮನಿಯವರು ಗುರುವಿನ ಯಶಸ್ಸು ವಿದ್ಯಾರ್ಥಿಗಳ ಗುರಿ ಸಾಧನೆಯಲ್ಲಿದೆ ಎಂದು ಹಿತವಚನ ನೀಡಿದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಿರೂಪಿಸಿ ನಿರ್ವಹಿಸಿದರು.
error: