May 17, 2024

Bhavana Tv

Its Your Channel

ಹೆಸ್ಕಾಂ ಗಣೇಶೋತ್ಸವ ಸಮಿತಿಯಿಂದ ಅನ್ನದಾನ ಹಾಗೂ ಧಾರ್ಮಿಕ ಕಾರ್ಯಕ್ರಮ

ಹೊನ್ನಾವರ: ಕಳೆದ 31 ವರ್ಷದಿಂದ ಆಚರಿಸ್ಪಡುವ ಹುಬ್ಬಳ್ಳಿ ವಿದ್ಯುತ್ ಪ್ರಸರಣಾ ನಿಗಮದ ಗಣೇಶೋತ್ಸವ ಸಮಿತಿಯಲ್ಲಿ ಅನ್ನದಾನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಎಳು ದಿನಗಳ ಕಾಲ ನಡೆಯುವ ಈ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಹೆಸ್ಕಾಮ ಅಧಿಕಾರಿಗಳು,ಸಿಬ್ಬಂದಿ ವಗ9 ಹಾಗೂ ಗ್ರಾಹಕರು ಪಾಲ್ಗೊಂಡು ಗಣಪನ ಕೃಪೆಗೆ ಪಾತ್ರರಾದರು.
ಧಾರ್ಮಿಕ ಕಾಯ9ಕ್ರಮದ ಅಂಗವಾಗಿ ಗಣಹವನ, ಹಾಗೂ ಅನ್ನದಾನ ಕಾರ್ಯಕ್ರಮಗಳು ನಡೆದವು. 31 ವಷ9ಗಳಿಂದ ನಡೆದುಕೊಂಡು ಬಂದಿರುವ ಈ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನಿತ್ಯವು ಧಾಮಿ9ಕ ಕಾರ್ಯಕ್ರಮ ಭಜನಾ ಕಾರ್ಯಕ್ರಮಗಳು, ಭಕ್ತಿ ಸಂಗೀತ ಕಾರ್ಯಕ್ರಮ, ಯಕ್ಷಗಾನ ಕಾರ್ಯಕ್ರಮಗಳು ನಡೆದವು.
ಈ ಸಂದಭ9ದಲ್ಲಿ ಭಾವನಾ ಟಿವಿಯೊಂದಿಗೆ ಮಾತನಾಡಿದ ಹೆಸ್ಕಾಂ ಹಿರಿಯ ಅಧಿಕಾರಿಗಳಾದ ರಾಮಕೃಷ್ಣ ಭಟ್ಟರವರು ಹೆಸ್ಕಾಂ ಆಚರಿಸಿಕೊಂಡು ಬರುತ್ತಿರುವ ಗಣೇಶೊತ್ಸವ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಇನ್ನೊವ9 ಹಿರಿಯ ಅಧಿಕಾರಿ ಶಂಕರ ಗೌಡರವರು ಮಾತನಾಡಿ ಸಿಬ್ಬಂದಿಗಳ ಪ್ರೋತ್ಸಾಹ ಹಾಗೂ ಕಾರ್ಯಕ್ರಮಗಳ ವಿವರ ನೀಡಿದರು.

ಹೊನ್ನಾವರ ಪ್ರತಿಷ್ಟಿತ ಸಾವ9ಜನಿಕ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಒಂದಾದ ಹೆಸ್ಕಾಂ ಗಣೇಶೋತ್ಸವ ಸಮಿತಿ ಮಾದರಿ ಕಾರ್ಯಕ್ರಮಗಳಿಂದ ಜನ ಮೆಚ್ಚುಗೆ ಪಡೆದಿದೆ.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: