ಹೊನ್ನಾವರ: ಪುಟಾಣಿ ಮಕ್ಕಳಿಗಾಗಿ ವಿದ್ಯೋದಯ ಶಾಲೆ ಕೃಷ್ಣಕೇರಿ ಗೇರುಸೊಪ್ಪದಲ್ಲಿ ಟಾಯ್ಸ್ ಡೇ ಯನ್ನು ಬಹಳ ಸುಂದರವಾಗಿ ಆಚರಿಸಲಾಯಿತು.
ವಿವಿಧ ರೀತಿಯ ಗೊಂಬೆಗಳನ್ನು ಅಲಂಕಾರಿಸಿಸುವುದರ ಜೊತೆಗೆ ನರ್ಸರಿ ಮಕ್ಕಳು ತಮಗೆ ಇಷ್ಟವಾದ ಗೊಂಬೆಯನ್ನು ಉದ್ದೇಶಿಸಿ ಬಹಳ ಸರಳವಾಗಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದರು. ತಂದೆ ತಾಯಿಗಳು ತಮ್ಮ ಹುಟ್ಟು ಹಬ್ಬದ ಸಂಕೇತವಾಗಿ ನೀಡಿದ ಗೊಂಬೆಯನ್ನು ಸ್ಮರಿಸಿ ಮಾತನಾಡಿದರು.
ಆಡಳಿತ ಅಧಿಕಾರಿಯಾದ ವಿ ಟಿ ನಾಯ್ಕ ಮಾತನ್ನಾಡಿ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಚೆನ್ನಾಗಿ ಮಾತನ್ನಡಲು ಟಾಯ್ಸ್ ಡೆಯನ್ನು ಆಚರಿಸಲಾಗಿದೆ ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಪೋಷಕರು, ಶಿಕ್ಷಕರ ಜೊತೆಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
More Stories
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,
ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಮೂಕ ಕಾಡು ಪ್ರಾಣಿ ಸಾವು