April 29, 2024

Bhavana Tv

Its Your Channel

ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಸಚಿವರಿಗೆ ಮನವಿ

ಹೊನ್ನಾವರ: ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾAತ ಕೊಚರೇಕರ ನೇತೃತ್ವದ ನಿಯೋಗವು ಇಂದು ಕೇಂದ್ರದ ಮೀನುಗಾರಿಕೆ ಸಚಿವ ಪುರುಷೋತ್ತಮ ರೂಪಾಲಿ ಮತ್ತು ಮೀನುಗಾರಿಕೆ ಸಚಿವ ಡಾ. ಎಲ್. ಮುರುಗನ್ ರವರನ್ನು ಕಾರವಾರದ ರಂಗಮAದಿರದಲ್ಲಿ ಭೇಟಿ ಮಾಡಿ ಜಿಲ್ಲೆಯ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಮತ್ತು ಕರಾವಳಿ ಮೀನುಗಾರರ ವಿವಿಧ ಸಮಸ್ಯೆಗಳ ಬಗ್ಗೆ ಗಮನಸೆಳೆದು ಜಿಲ್ಲೆಯ ಮೀನುಗಾರಿಕೆ ವಲಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಆಗ್ರಹ ಪಡಿಸಿದರು. ನೀಯೋಗದಲ್ಲಿ ಡಾ. ಪ್ರಕಾಶ ಮೇಸ್ತ ಕರಾವಳಿ ಮೀನುಗಾರರ ಸಂಘದ ಅಧ್ಯಕ್ಷ ರಾಜೇಶ್ ತಾಂಡೇಲ್,ಕಾರವಾರದ ವಿಕಾಸ ಕೆ. ತಾಂಡೇಲ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

error: