ಹೊನ್ನಾವರ : “ರಾಘು ಫ್ರೆಂಡ್ಸ್ ಕಾಸರಕೋಡ” ಗೆಳೆಯರ ಬಳಗವು ಕಳೆದ ಆರು ವರ್ಷಗಳಿಂದ ‘ಹೋಳಿ ಹಬ್ಬ’ದಂದು ಸಂಗ್ರಹಿಸಿದ ಹಣವನ್ನು ಅಂಗವೈಕಲ್ಯ ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ಬಡ ವ್ಯಕ್ತಿಗಳ ಕುಟುಂಬಕ್ಕೆ ನೀಡಿ ಅವರಿಗೆ ನೆರವಾಗುವ ಮೂಲಕ ವಿಶಿಷ್ಠ ರೀತಿಯಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಿದೆ,
ಈ ವರ್ಷವೂ ಸಹ ಹೋಳಿ ಹಬ್ಬ ದಂದು ಸಂಗ್ರಹಿಸಿದ ರೂ. 20,000/- ಹಣವನ್ನು, ರಸ್ತೆ ಅಪಘಾತದಿಂದಾಗಿ ತೀವ್ರ ಗಾಯವಾಗಿ ಬಳಲುತ್ತಿರುವ ಹಾಗೂ ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರುವ ಕಾಸರಕೋಡಿನ ಮಲಬಾರಕೇರಿಯ “ಶ್ರೀ ಪಾಂಡುರAಗ ಗಜಾನನ ಪೈ” ಇವರ ಕುಟುಂಬಕ್ಕೆ ನೀಡಿ ಅವರ ಆರೋಗ್ಯ ಸುಧಾರಿಸಲೆಂದು ದೇವರಲ್ಲಿ ಪ್ರಾರ್ಥಿಸಿ, ಏಳನೇ ವರ್ಷದ ಹೋಳಿ ಹಬ್ಬವನ್ನೂ ಸಹ ಸಾರ್ಥಕವಾಗಿ ಆಚರಿಸಿರುತ್ತಾರೆ.
ಹಣ ನೀಡುವ ಮೂಲಕ ಸಂಘದ ಸತ್ಕಾರ್ಯದಲ್ಲಿ ಭಾಗಿಯಾಗಿರುವ ಎಲ್ಲರಿಗೂ “ರಾಘು ಫ್ರೆಂಡ್ಸ್ ಕಾಸರಕೋಡ” ಬಳಗದ ವತಿಯಿಂದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್