May 17, 2024

Bhavana Tv

Its Your Channel

ಕುಮಟಾ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ದಿಂದ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶರವರಿಗೆ ಮನವಿ

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ.

ಕುಮಟಾ:- ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಬಲ ಪುನರ್ ರ‍್ಗೀಕರಣ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು ಪ್ರಾಥಮಿಕ ಶಾಲೆಯಲ್ಲಿ ಸೇವೆಸಲ್ಲಿಸುತ್ತಿರುವ ಸೇವಾ ಜೇಷ್ಠತೆ ಹಾಗೂ ಬಿ.ಎ, ಬಿಎಸ್‌ಸಿ, ಎಂ.ಎ, ಬಿ.ಇಡಿ ಪದವಿ ಹೊಂದಿರುವ ಶಿಕ್ಷಕರಿಗೆ ಆದ ಅನ್ಯಾಯವನ್ನು ಸರಿಪಡಿಸುವಂತೆ ಕುಮಟಾದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ ಅವರಿಗೆ ಶಾಸಕ ದಿನಕರ ಶೆಟ್ಟಿಯವರ ಸಮ್ಮುಖದಲ್ಲಿ ಕುಮಟಾ ತಾಲೂಕು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಶಿಕ್ಷಕ ಡಾ.ಶ್ರೀಧರ ಗೌಡ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಚಿವರು ಈಗಾಗಲೇ ಈ ಸಮಸ್ಯೆಯು ನನ್ನ ಗಮನಕ್ಕೆ ಬಂದಿದ್ದು ಮೂಲ ಶಿಕ್ಷಕರಿಗೆ ತೊಂದರೆಯಾಗಿರುವುದು ಕಂಡುಬಂದಿದೆ. ಅತಿ ಶೀಘ್ರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.
ಈ ಸಂರ‍್ಭದಲ್ಲಿ ಸಂಘದ ಕರ‍್ಯರ‍್ಶಿ ಶಿಕ್ಷಕ ಮಂಜುನಾಥ. ಎಂ. ನಾಯ್ಕ ಜೊತೆಗಿದ್ದರು.

error: