ಕುಮಟಾ: ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಿರೇಓಣಿ, ಮಾದರಿರಸ್ತೆ,ಹೊಲನಗದ್ದೆ,ಗುಡೇಅಂಗಡಿ ಗ್ರಾಮಗಳ ಆರಾಧ್ಯ ದೈವ ಶ್ರೀಜಟಕೇಶ್ವರನ ಸನ್ನಿಧಿಯಲ್ಲಿ ವಾರ್ಷಿಕ ಭಜನಾ ಕಾರ್ಯಕ್ರಮ,ಸತ್ಯನಾರಾಯಣ ಪೂಜೆ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಕಳೆದ ಏಳು ದಿನಗಳಿಂದ ನಿರಂತರವಾಗಿ ಅಹೋ ರಾತ್ರಿ ನಡೆಸಿಕೊಂಡು ಬಂದ ಭಜನಾ ಕಾರ್ಯಕ್ರಮ ಭಾನುವಾರ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಸಾರ್ವಜನಿಕರು ಪಾಲ್ಗೊಂಡು ಶ್ರೀದೇವರ ಪ್ರಸಾದ ಪಡೆದು ಪುನೀತರಾದರು.
ಈ ಸಂದರ್ಭದಲ್ಲಿ ಜಟಗೇಶ್ವರ ಭಕ್ತ ವೃಂದದ ಅಧ್ಯಕ್ಷ ನಾಗರಾಜ ನಾಯ್ಕ ಮಾತನಾಡಿ ಪ್ರತಿ ವರ್ಷ ವಾರ್ಷಿಕ ಭಜನಾ ಸಪ್ತಾಹವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮದ ಜನರು ಆರೋಗ್ಯವಂತರಾಗಿ, ಸುಖ,ಶಾಂತಿ ನೆಮ್ಮದಿಯಿಂದ ಬಾಳುವಂತಾಗಲಿ ಎಂಬ ಉದ್ದೇಶದಿಂದ ಶ್ರೀ ಜಟಕೇಶ್ವರ ಸ್ವಾಮಿಯ ಸನ್ನಿದಾನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಟಗೇಶ್ವರ ಭಕ್ತ ವೃಂದದ ಉಪಾಧ್ಯಕ್ಷ ದಯಾನಂದ ನಾಯ್ಕ,ಕಾರ್ಯದರ್ಶಿ ನಾಗರಾಜ ಎಸ್ ನಾಯ್ಕ,ಖಜಾಂಚಿ ಈಶ್ವರ ನಾಯ್ಕ,ವಾಸು ಎಮ್. ನಾಯ್ಕ, ಊರ ನಾಗರೀಕರು ಹಾಜರಿದ್ದರು
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ