May 16, 2024

Bhavana Tv

Its Your Channel

ವಾಲಗಳ್ಳಿ ಗ್ರಾ.ಪಂ. ವ್ಯಾಪ್ತಿಯ ತಲಗೋಡ ರಸ್ತೆ ಸಮಸ್ಯೆ ಬಗ್ಗೆ ಗ್ರಾಮಸ್ಥರಿಂದ ಮನವಿ; ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ

ಕುಮಟಾ:-ವಾಲಗಳ್ಳಿ ಗ್ರಾಮ ಪಂಚಾಯ್ತಿಯ ತಲಗೊಡ ಗ್ರಾಮದಲ್ಲಿ ಗ್ರಾಮ ಮತ್ತು ಹಾಲಕ್ಕಿ ಒಕ್ಕಲಿಗರ ಸಮುದಾಯದವರು ಆರಾಧಿಸುವ ದೇವರ ಪೂಜೆಗೆ ತೆರಳಲು ಮಾರ್ಗದ ಸಮಸ್ಯೆಯಿದ್ದು ರಸ್ತೆ ಪಕ್ಕದ ಗುಡ್ಡ ತೆರವು ಮಾಡಿ ಕೊಡಬೇಕೆಂದು ಸ್ಥಳೀಯರು ಶಾಸಕ ದಿನಕರ ಶೆಟ್ಟಿ ಅವರ ಬಳಿ ಮನವಿ ಮಾಡಿಕೊಂಡರು. ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಅಹವಾಲು ಸ್ವೀಕರಿಸಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಿವಪ್ಪ ಗೌಡ, ಮಾದೇವ ಗೌಡ, ನಾರಾಯಣ ಪಟಗಾರ, ನಾರಾಯಣ ಗೌಡ ಗಣಪತಿ ಪಟಗಾರ, ಈಶ್ವರ ಗೌಡ, ದೇವಪ್ಪ, ಉಪಾಧ್ಯಕ್ಷೆ ಗಂಗಾ ಪಟಗಾರ, ಶ್ರೀಕಾಂತ ಶಾಸ್ತ್ರಿ, ಪಂಚಾಯ್ತಿ ಸದಸ್ಯರಾದ ಗಣಪತಿ ಅಬ್ಬಿ ಭಟ್ಟ, ಪುಷ್ಪಾ ಮುಕ್ರಿ ಹಾಗೂ ಎಬಿವಿಪಿ ಪ್ರಮುಖ ಶಶಾಂಕ ಶಾಸ್ತ್ರಿ, ಗಣಪು ಗೌಡ ಇದ್ದರು.

error: