ಕುಮಟಾ:-ವಾಲಗಳ್ಳಿ ಗ್ರಾಮ ಪಂಚಾಯ್ತಿಯ ತಲಗೊಡ ಗ್ರಾಮದಲ್ಲಿ ಗ್ರಾಮ ಮತ್ತು ಹಾಲಕ್ಕಿ ಒಕ್ಕಲಿಗರ ಸಮುದಾಯದವರು ಆರಾಧಿಸುವ ದೇವರ ಪೂಜೆಗೆ ತೆರಳಲು ಮಾರ್ಗದ ಸಮಸ್ಯೆಯಿದ್ದು ರಸ್ತೆ ಪಕ್ಕದ ಗುಡ್ಡ ತೆರವು ಮಾಡಿ ಕೊಡಬೇಕೆಂದು ಸ್ಥಳೀಯರು ಶಾಸಕ ದಿನಕರ ಶೆಟ್ಟಿ ಅವರ ಬಳಿ ಮನವಿ ಮಾಡಿಕೊಂಡರು. ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಅಹವಾಲು ಸ್ವೀಕರಿಸಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿವಪ್ಪ ಗೌಡ, ಮಾದೇವ ಗೌಡ, ನಾರಾಯಣ ಪಟಗಾರ, ನಾರಾಯಣ ಗೌಡ ಗಣಪತಿ ಪಟಗಾರ, ಈಶ್ವರ ಗೌಡ, ದೇವಪ್ಪ, ಉಪಾಧ್ಯಕ್ಷೆ ಗಂಗಾ ಪಟಗಾರ, ಶ್ರೀಕಾಂತ ಶಾಸ್ತ್ರಿ, ಪಂಚಾಯ್ತಿ ಸದಸ್ಯರಾದ ಗಣಪತಿ ಅಬ್ಬಿ ಭಟ್ಟ, ಪುಷ್ಪಾ ಮುಕ್ರಿ ಹಾಗೂ ಎಬಿವಿಪಿ ಪ್ರಮುಖ ಶಶಾಂಕ ಶಾಸ್ತ್ರಿ, ಗಣಪು ಗೌಡ ಇದ್ದರು.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ