April 27, 2024

Bhavana Tv

Its Your Channel

ನೆಲ್ಲಿಕೇರಿ ಶಾಲೆಯಲ್ಲಿ ಶಾಸಕ ದಿನಕರ ಅವರಿಂದ ಧ್ವಜಾರೋಹಣ

ಕುಮಟಾ ನೆಲ್ಲಿಕೇರಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಧ್ವಜಾರೋಹಣವನ್ನು ಶಾಸಕ ದಿನಕರ ಕೆ. ಶೆಟ್ಟಿ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಇಂದು ನಾವೆಲ್ಲರೂ ಸ್ವಾತಂತ್ರೊತ್ಸವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದ್ದೇವೆ. ಆದರೆ ಸ್ವಾತಂತ್ಪೂರ್ವದಲ್ಲಿ ನಮ್ಮ ದೇಶದ ನಾಯಕರು ಹಾಗೂ ಜನತೆ ಅನೇಕ ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆ. ಅಂದು ಸ್ವಾತಂತ್ರ‍್ಯ ಹೋರಾಟಗಾರರು ತಮ್ಮ ಜೀವವನ್ನು ಬಲಿಗೊಟ್ಟು ನಮಗೆ ಸ್ವಾತಂತ್ರ  ವನ್ನು ಒದಗಿಸಿದ್ದು, ಅವರನ್ನು ನಾವಿಂದು ನೆನಪಿಸಬೇಕಾಗಿದೆ. ಇದಲ್ಲದೇ ಸ್ವಾತಂತ್ರö್ಯದ ನಿಜವಾದ ಅರ್ಥ ತಿಳಿದು, ನಮ್ಮ ದೇಶವನ್ನು ಉತ್ತಮ ಮಾರ್ಗದೆಡೆಗೆ ಕೊಂಡೊಯ್ಯಲು ನಾವೆಲ್ಲರೂ ಸಿದ್ಧರಾಗಬೇಕೆಂದು ತಿಳಿಸಿದರು. 
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪಿಯು ಕಾಲೇಜಿನ ಪ್ರಾಚಾರ್ಯ ಸತೀಶ ನಾಯ್ಕ, ಪ್ರೌಢಶಾಲಾ ಮುಖ್ಯಾಧ್ಯಾಪಕ ಶಿವಾನಂದ ಭಟ್ಟ, ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕಿ ಸುಮನಾ ನಾಯ್ಕ, ಪ್ರಾಧ್ಯಾಪಕ ವೃಂದದವರೂ, ವಿಧ್ಯಾರ್ಥಿಗಳು ಹಾಜರಿದ್ದರು. 
ವಿದ್ಯಾರ್ಥಿಗಳು  ಸ್ವಾತಂತ್ರ‍್ಯ  ಹೋರಾಟಗಾರ ವೇಷವನ್ನು ತೊಟ್ಟಿರುವುದು ವಿಶೇಷವಾಗಿ ಗಮನ ಸೆಳೆದವು.
error: