May 1, 2024

Bhavana Tv

Its Your Channel

ಬಿಜೆಪಿ ಯ ಯುವ ಮೋರ್ಚಾ ಜಿಲ್ಲಾ ಪ್ರಭಾರಿ ಎಮ್ ಜಿ ಭಟ್ ಅವರಿಗೆ ಸನ್ಮಾನ

ಕುಮಟಾದಲ್ಲಿ ನೆಲೆಸಿರುವ ರಾಜಸ್ಥಾನಿಗಳು ಮತ್ತು ಗುಜರಾತಿಗಳೆಲ್ಲ ಸೇರಿ ಅತ್ಯಂತ ಸಂಭ್ರಮ ಸಡಗರದಿಂದ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಿದರು.ಸಂಭ್ರಮದಲ್ಲಿ ಬಿಜೆಪಿ ಯ ಯುವ ಮೋರ್ಚಾ ಜಿಲ್ಲಾ ಪ್ರಭಾರಿ ಎಮ್ ಜಿ ಭಟ್ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಎಂ ಜಿ ಭಟ್ ಅವರನ್ನು ಪೇಟ ತೊಡಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಂ ಜಿ ಭಟ್ ಇಂದು ನಮ್ಮ ದೇಶದಲ್ಲಿ ಪ್ರತಿಯೊಬ್ಬ ಹಿಂದೂ ಕೂಡ ಧರ್ಮಕ್ಕಾಗಿ ಕೆಲಸ ಮಾಡ್ಬೇಕಾಗಿದೆ. ನಾವೆಲ್ಲ ಒಂದಾಗಿ ಧರ್ಮ ರಕ್ಷಣೆ ಮಾಡಲೇಬೇಕಾಗಿದೆ. ಮುಂದಿನ ಪೀಳಿಗೆಗಾಗಿ ಸದೃಡ ದೇಶ ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ದೂರದ ಊರಿನಿಂದ ನಮ್ಮ ಕುಮಟಾದಲ್ಲಿ ನೆಲೆ ನಿಂತು ನಮ್ಮೊಂದಿಗೆ ಬೆರೆತಿರುವ ರಾಜಸ್ಥಾನಿಗಳು ಮತ್ತು ಗುಜರಾತಿಗಳು ಪ್ರತಿ ವರ್ಷವೂ ಅದ್ದೂರಿಯಾಗಿ ಸಂಪ್ರದಾಯದAತೆ ಪ್ರತಿ ವರ್ಷವೂ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ,ಇAತಹ ಧಾರ್ಮಿಕ ಕಾರ್ಯಕ್ರಮಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕಾಗಿದೆ. ಎಂಬ ಸಂದೇಶ ನೀಡಿದರು.

ವರದಿ: ನಟರಾಜ ಗದ್ದೆಮನೆ

error: