May 2, 2024

Bhavana Tv

Its Your Channel

ಮುರ್ಡೇಶ್ವರ ಕಡಲತೀರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಪ್ರವಾಸಿಗನ ರಕ್ಷಣೆ

ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಲಾಗಿದೆ. ಗದಗ ತಾಲ್ಲೂಕಿನ ಬಾಲೆಹೊಸೂರು ನಿವಾಸಿ 35 ವರ್ಷದ ಬಸವರಾಜ ರಕ್ಷಣೆಗೊಳಗಾದ ಪ್ರವಾಸಿಗ ಕೆಎಸ್‌ಆರ್‌ಟಿಸಿ ಬಸ್ ಚಾಲಕನಾಗಿರುವ ಬಸವರಾಜ ಧರ್ಮಸ್ಥಳದಿಂದ ಮುರ್ಡೇಶ್ವರಕ್ಕೆ ಪ್ರವಾಸಿಗರನ್ನು ಕರೆತಂದಿದ್ದ. ಕಡಲತೀರದಲ್ಲಿ ಬಸ್ ನಿಲ್ಲಿಸಿ ಸಮುದ್ರದಲ್ಲಿ ಈಜಾಡಲು ತೆರಳಿದ್ದು ಈ ವೇಳೆ ಅಪ್ಪಳಿಸಿದ ಭಾರೀ ಅಲೆಗಳ ಹೊಡೆತಕ್ಕೆ ಸಿಕ್ಕು ಮುಳುಗುವ ಹಂತ ತಲುಪಿದ್ದ.
ಸಮುದ್ರದಲ್ಲಿ ಮುಳುಗುತ್ತಿದ್ದವನನ್ನು ಗಮನಿಸಿದ ಬೀಚ್ ಲೈಫ್‌ಗಾರ್ಡ್ ಶೇಖರ ದೇವಾಡಿಗ, ವಿಶ್ಲೇಶ್ ಹರಿಕಂತ್ರ, ಪ್ರವೀಣ ಓಶಿಯನ್ ಅಡ್ವೆಂಚರ್ ಬೋಟಿನ ಸಿಬ್ಬಂದಿ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ಮುರ್ಡೇಶ್ವರ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಇದರ ನಡುವೆಯೇ ಬೀಚ್ ಗಳಲ್ಲಿ ಕೆಲವು ಪ್ರವಾಸಿಗರು ಅತಿರೇಕವಾಗಿವರ್ತಿಸುತ್ತಿದ್ದಾರೆ, ಲೈಫ್ ಗಾರ್ಡ್ ಜೊತೆ ಪ್ರವಾಸಿಗರು ಅನುಚಿತವಾಗಿ ವರ್ತಿಸುತ್ತಾರೆ ಲೈಫ್ ಗಾರ್ಡ್ ಸೂಚನೆಯನ್ನು ಧಿಕ್ಕರಿಸಿ ಸಮುದ್ರಕ್ಕೆ ಇಳಿಯುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆ ಮತ್ತು ಸಂಬAಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

error: