May 2, 2024

Bhavana Tv

Its Your Channel

ಮುರುಡೇಶ್ವರ ಶಾಲೆಯಲ್ಲಿ ಕದ್ದವರನ್ನು ಬಂಧಿಸಿದ ಪೊಲೀಸರು

ಭಟ್ಕಳ: ಕಳೆದ ಕೆಲ ತಿಂಗಳ ಹಿಂದೆ ಮುರುಡೇಶ್ವರ ನ್ಯಾಶನಲ್ ಕಾಲೋನಿ, ಅಕ್ಕಪಕ್ಕದ ಪ್ರದೇಶಗಳಲ್ಲಿ ಇರುವ ಶಾಲೆಗಳಿಗೆ ಕನ್ನ ಹಾಕಿದ್ದ ಇಬ್ಬರು ಕಳ್ಳರನ್ನು ಮುರುಡೇಶ್ವರ ಪೊಲೀಸರು
ಬಂಧಿಸಿ ಭಟ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಡುಪಿ ಕಾಪು ಹೆಜಮಾಡಿಯ ನಿವಾಸಿ ಜಾಹೀದ್ ಸಿನಾನ್ (32) ಮತ್ತು ಉತ್ತರಕನ್ನಡ ಗೋಕರ್ಣದ ಕುಮಾರಸ್ವಾಮಿ ಮುರುಗೇಶ (59) ಎಂದು ಗುರುತಿಸಲಾಗಿದ್ದು, ಉಡುಪಿ ಕೋಟಾ ಠಾಣೆಯ ಪೊಲೀಸರು ಒಂದೆರಡು ತಿಂಗಳ ಹಿಂದೆಯೇ ಬಂಧಿಸಿದ್ದರು. ವಿಚಾರಣೆಯ ವೇಳೆ ಆರೋಪಿಗಳು ಉಡುಪಿ ಸುತ್ತಮುತ್ತ ಸರಿಸುಮಾರು 25ಕ್ಕೂ ಹೆಚ್ಚು ಹಾಗೂ ಮುರುಡೇಶ್ವರದಲ್ಲಿ 4-5 ಶಾಲೆಗಳ ಬಾಗಿಲು ಒಡೆದು ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದರು. ಇದೀಗ ಮುರುಡೇಶ್ವರ ಪೊಲೀಸರು ಆರೋಪಿಗಳನ್ನು ಭಟ್ಕಳಕ್ಕೆ ಹಾಜರುಪಡಿಸಿದ ನಂತರ, ಮುರುಡೇಶ್ವರದಲ್ಲಿ ಪಂಚನಾಮೆ ನಡೆಸಿ ಉಡುಪಿಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭಿಸಿದೆ. ನ್ಯಾಶನಲ್ ಕಾಲೋನಿ ಶಾಲಾ ಕಳ್ಳತನದ ಸಂಬOಧ ಮುರುಡೇಶ್ವರ ಠಾಣೆಯಲಿ ಪಕರಣ ದಾಖಲಾಗಿದೆ.

error: