ಸಿದ್ಧಾಪುರ: ಅರಣ್ಯ ಅತೀಕ್ರಮಣದಾರರಿಗೆ ನ್ಯಾಯ ಕೊಡಲು ಹೋರಾಟಗಾರರ ವೇದಿಕೆಯು ಬದ್ಧವಾಗಿದೆ, ಭೂಮಿ ಹಕ್ಕು ಕೊಡಲು ಸರಕಾರ ವಿಫಲವಾದರೂ, ಕಾನೂನಾತ್ಮಕ ಹೋರಾಟದೊಂದಿಗೆ ಭೂಮಿಯ ಹಕ್ಕು ಕೋಡಲು ಪ್ರಯತ್ನಿಸಲಾಗುವುದೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಸಿದ್ಧಾಪುರ ತಾಲೂಕಿನ, ಕಾನಸೂರಿನ, ಗಜಾನನೋತ್ಸವ ಸಮಿತಿಯ ಸಬಾಂಗಣದಲ್ಲಿ ಜರುಗಿದ ಫೇ 17 ರ ಬೆಂಗಳೂರು ಕಾರ್ಯಕ್ರಮದ ಕೊನೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಅತೀಕ್ರಮಣದಾರರಿಗೆ ಮೂಲಭೂತ ಸೌಲಭ್ಯ ಸರಕಾರ ನೀಡಿದರೇ ಸಾಕಾಗದು. ಭೂಮಿ ಹಕ್ಕು ಕೊಡುವ ದಿಶೆಯಲ್ಲಿ ಚಿಂತಿಸಬೇಕಾಗಿದೆ. ಸರಕಾರ ಅರಣ್ಯವಾಸಿಗಳ ಪರವಾದ ನಿಲುವನ್ನು ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಅತೀಕ್ರಮಣದಾರರು ನಿರಾಶ್ರಿತರಾಗುವುದರಲ್ಲಿ ಸಂಶಯವಿಲ್ಲ. ಈ ದಿಶೆಯಲ್ಲಿ ಸರಕಾರ ಇಚ್ಛಾಶಕ್ತಿ ಪ್ರಕಟಿಸಬೇಕೆಂದು
ಅವರು ಹೇಳಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಉಮೇಶ ನಾಯ್ಕ ಶೇಲೂರು, ಸ್ವಾಗತ ಮತ್ತು ವಂದನಾರ್ಪಣೆಯನ್ನು ಸತೀಶ ನಾಯ್ಕ ಶೆಲೂರು ಅವರು ಮಾಡಿದರು. ಸಭೆಯಲ್ಲಿ ಉದಯ ನಾಯ್ಕ ವಕೀಲರು, ದೇವಿದಾಸ ನಾಯ್ಕ, ಸೀತಾರಾಮ ಗೌಡ ನೀರಗಾನ್, ಜಾನು ಗೌಡ ಗಮನಗುಡ್ಡಿ ಮುಂತಾದವರು ಉಪಸ್ಥಿತರಿದ್ದರು.
More Stories
ಅಪರೂಪದ ದೇವಾಲಯ. ಬಲಮುರಿ, ತ್ರಿನೇತ್ರ, ಆರುಕೈಗಳುಳ್ಳ ಮಹಾ ಗಣಪತಿ
ಜನಮನ ಸೂರೆಗೊಂಡ ನಾಣಿಕಟ್ಟಾ ಯಕ್ಷಗಾನ ಹಿಮ್ಮೇಳ ವೈಭವ.
ನಿಲ್ಕುಂದ- ಸಂತೆಗುಳಿ ಸರ್ವಋತು ರಸ್ತೆಗೆ ನಿರ್ಲಕ್ಷö್ಯ ;
ಹೋರಾಟಕ್ಕೂ ಸ್ಪಂಧಿಸದ ಸರಕಾರ- ರವೀಂದ್ರನಾಯ್ಕ.