ಶಿರಸಿ: ೨೦೨೧-೨೨ನೇ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ೬, ಹಿರಿಯ ಪ್ರಾಥಮಿಕ ವಿಭಾಗದಿಂದ ೬ ಹಾಗೂ ಪ್ರೌಢಶಾಲಾ ವಿಭಾಗದಿಂದ ೬ ಸೇರಿ ಒಟ್ಟು ೧೮ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
- ಕಿರಿಯ ಪ್ರಾಥಮಿಕ ಶಾಲೆ ವಿಭಾಗ:- ಶಿರಸಿ ತಾಲ್ಲೂಕಿನ ತೆಪ್ಪಗಿ ಶಾಲೆಯ ಸಹ ಶಿಕ್ಷಕ ನಾಗರಾಜ ನೀಲೇಕಣಿ, ಸಿದ್ದಾಪುರ ತಾಲೂಕಿನ ಸುಂಕತ್ತಿ ಶಾಲೆಯ ಸಹ ಶಿಕ್ಷಕಿ ಲಲಿತಾ ಹೆಗಡೆ, ಯಲ್ಲಾಪುರ ತಾಲೂಕಿನ ಶೀಗೆಕೇರಿಯ ಶಾಲೆಯ ನಾರಾಯಣ ಭಟ್, ಮುಂಡಗೋಡ ತಾಲೂಕಿನ ಗೋದ್ನಾಳ ಶಾಲೆಯ ಶಿಕ್ಷಕ ಲೋಕೇಶ ನಾಯ್ಕ, ಹಳಿಯಾಳ ತಾಲೂಕಿನ ಹನೋಡಾದ ರಾಮಪ್ಪ ಸಿದ್ದರ, ಜೋಯಿಡಾ ಕರಂಜೆಯ ಛಾಯಾ ಡೇರಿಯೆಕರ
- ಹಿರಿಯ ಪ್ರಾಥಮಿಕ ಶಾಲೆ ವಿಭಾಗ:- ಶಿರಸಿ ತಾಲೂಕಿನ ಹೆಗಡೆಕಟ್ಟಾ ಶಾಲೆಯ ಸತೀಶ ಹೆಗಡೆ, ಸಿದ್ದಾಪುರ ತಾಲೂಕಿನ ಬೇಡ್ಕಣಿ
ಶಾಲೆಯ ಕೆ.ಪಿ.ರವಿ, ಯಲ್ಲಾಪುರ ತಾಲೂಕಿನ ಇಡಗುಂದಿ ಶಾಲೆಯ ಗಣಪತಿ ಗೌಡ, ಮುಂಡಗೋಡ ತಾಲೂಕಿನ ಉಮ್ಮಚಗಿ ಶಾಲೆಯ ಡಿ. ಅನುಪಮಾ, ಹಳಿಯಾಳ ತಾಲೂಕಿನ ಕೇರವಾಡ ಶಾಲೆಯ ಶ್ರೀನಿವಾಸರಾವ್ ನಾವಲಿ, ಜೋಯಿಡಾ ತಾಲೂಕಿನ ಕಾಳಸಾಯಿ ಶಾಲೆಯ ಶಕುಂತಲಾ ಮಾಧವ - ಪ್ರೌಢಶಾಲೆ ವಿಭಾಗ :- ಶಿರಸಿ ನಗರದ ಆವೆಮರಿಯಾ ಪ್ರೌಢಶಾಲೆಯ ಕಿರಣ ಫರ್ನಾಂಡಿಸ್, ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ರಾಘವೇಂದ್ರ ನಾಯ್ಕ, ಯಲ್ಲಾಪುರ ತಾಲೂಕಿನ ಮಲವಳ್ಳಿ ಸರ್ಕಾರಿ ಪ್ರೌಢಶಾಲೆಯ ಸಂತೋಷ ಶೆಟ್ಟಿ, ಮುಂಡಗೋಡ ತಾಲೂಕಿನ ಅಂದಲಗಿ ಸರ್ಕಾರಿ ಪ್ರೌಢಶಾಲೆಯ ವೀರಪ್ಪ ಜಾವಳ್ಳಿ, ಹಳಿಯಾಳ ತಾಲೂಕಿನ ತೇರಗಾಂವ ಪ್ರೌಢಶಾಲೆಯ ಗುರುನಾಥ ಹೆಗಡೆ ಹಾಗೂ ಜೋಯಿಡಾ ಬಾಪೇಲಿ ಕ್ರಾಸ್ ಸರ್ಕಾರಿ ಪ್ರೌಢಶಾಲೆಯ ಗೋವಿಂದ ಎಂ.ಅoಬಿಗ, ಇವರನ್ನು ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ