May 2, 2024

Bhavana Tv

Its Your Channel

ಸಾಹಿತ್ಯದ ಗುಣಧರ್ಮ ತ್ವರಿತವಾಗಿ ಬದಲಾಯಿಸುತ್ತಿದೆ-ಭಾಗೀರಥಿ ಹೆಗಡೆ

ವರದಿ: ವೇಣುಗೋಪಾಲ ಮದ್ಗುಣಿ

ಸಿರಸಿ: ಕಾಲಕ್ಕನುಗುಣವಾಗಿ ಸಾಹಿತ್ಯ ಮತ್ತು ಸಾಹಿತಿಗಳ ಗುಣಧರ್ಮ ಬದಲಾವಣೆ ಕಾಣುತ್ತಿದೆ. ಸಾಧನೆಗೆ ಕೊನೆಯೆಂಬುದಿಲ್ಲ. ಸೋಲನ್ನು ಯಶಸ್ಸಿನ ಮೆಟ್ಟಿಲನ್ನಾಗಿಸಿಕೊಂಡವ ಸಾಧನೆಯ ಶಿಖರವೇರುತ್ತಾನೆ, ಎಂದವರು ಹಿರಿಯ ಬರಹಗಾರ್ತಿ ಭಾಗೀರಥಿ ಹೆಗಡೆಯವರು ಶಿರಸಿಯ ವಿವೇಕಾನಂದ ನಗರದ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ನಡೆದ ಕವಯತ್ರಿ ವಿಮಲಾ ಭಾಗ್ವತ್ ರ ‘ಕಲರವ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಈ ರೀತಿಯಾಗಿ ಅಭಿಪ್ರಾಯಪಟ್ಟರು.
ನಮ್ಮ ಅನುಭವವೇ ನಮಗೆ ಕಾವ್ಯವಾಗಿ ಪರಿಣಮಿಸಬೇಕು. ಮಧ್ಯಮ ವಯಸ್ಸಿನಲ್ಲಿ ಬರೆದ ಸಾಹಿತ್ಯ ಅನುಭವಭರಿತವಾಗಿರುತ್ತವೆ. ಅವು ಪರಿಪಕ್ವಗೊಂಡಿರುತ್ತದೆ. ಕಾವ್ಯಧರ್ಮವನ್ನು ಅಳವಡಿಸಿಕೊಂಡ ಕವಿ ಶ್ರೇಷ್ಠನೆನಿಸಿಕೊಳ್ಳುತ್ತಾನೆ, ಎಂದವರು ಜನಮಾದ್ಯಮ ಪತ್ರಿಕೆ ಸಂಪಾದಕರಾದ ಅಶೋಕ ಹಾಸ್ಯಗಾರವರು ಸಮಾರಂಭವನ್ನು ಉದ್ಘಾಟಿಸಿ ಈ ರೀತಿಯಾಗಿ ನುಡಿದರು.
ಕೃತಿ ಪರಿಚಯ ಮಾಡಿದ ಚುಟುಕು ಕವಿ ದತ್ತಗುರು ಕಂಠಿಯವರು ಮಾತನ್ನಾಡಿ, ಸಾಹಿತ್ಯದ ಸಾಂಗತ್ಯದಿAದಾಗಿ ಕವಿಯತ್ರಿ ಒಂಟಿತನದಿAದ ವಿಮುಕ್ತರಾಗಿದ್ದಾರೆ. ಭಾವಗೀತೆ, ಭಕ್ತಿಗೀತೆ, ಚುಟುಕು, ಜಡೆಗವನ, ಹನಿಗವನ, ಗಝಲ್, ಮುಕ್ತಕ. ಷಟ್ಪದಿ ಹೀಗೆ ಸಾಹಿತ್ಯದ ಸರ್ವಪ್ರಾಕಾರಗಳಲ್ಲಿಯೂ ಕೈಯಾಡಿಸಿ ಯಶಸ್ವಿಯಾದವರು. ವಾಟ್ಸಾಪ್ ಬಳಗದಲ್ಲಿ ನಿತ್ಯ ಬರವಣಿಗೆ ರೂಢಿಸಿಕೊಂಡಿದ್ದು ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದು ಹೆಮ್ಮೆಯ ಸಂಗತಿ, ಎಂದರು.
ವ್ಯಕ್ತಿಯೊಬ್ಬನ ಸಂಸ್ಕೃತಿ, ಸಂಸ್ಕಾರವು ಆತ ರಚಿಸಿದ ಸಾಹಿತ್ಯ ಮೇಲೆ ಪರಿಣಾವನ್ನುಂಟು ಮಾಡುತ್ತದೆ, ಎಂದವರು ಗಣಪತಿ ಭಟ್ಟ ವರ್ಗಾಸರರವರು. ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಸಾಹಿತಿ ಎಸ್.ಎಸ್.ಭಟ್ ಮಾತನ್ನಾಡಿ, ಸಂಗೀತ ಮತ್ತು ಸಾಹಿತ್ಯ ವಿಮಲಾ ಭಾಗ್ವತರ ಜೀವನೋತ್ಸಾಹದ ಗುಟ್ಟು. ಅವರ ಪ್ರಯತ್ನಶೀಲತೆಗೆ ಸೃಜನಶೀಲತೆ ಪೂರಕವಾಗಿ ಕೆಲಸ ಮಾಡುತ್ತಿವೆ, ಎಂದರು. ಕಥೆಗಾರ ಡಿ.ಎಸ್. ನಾಯ್ಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕೃತಿಕಾರಿಣಿ ವಿಮಲಾ ಭಾಗ್ವತರು ತಮ್ಮದೇ ಕೃತಿಯಲ್ಲಿರುವ ಕವನಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇದಕ್ಕೆ ಗೀತಾ ಜೋಷಿ ಹಾರ್ಮೋನಿಯಂ ಹಾಗೂ ಸನತ್ ರಾವ್ ತಬಲಾ ಸಾಥ್ ನೀಡಿದರು.ಪ್ರಾರಂಭದಲ್ಲಿ ಭಾರತಿ ಹೆಗಡೆ ಪ್ರಾರ್ಥನಾಗೀತೆ ಹಾಡಿದರು. ಪ್ರತಿಭಾ ನಾಯ್ಕ ಸ್ವಾಗತಿಸಿದರು. ವಿಜಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಾವಿತ್ರಿ ಶಾಸ್ತ್ರಿ ವಂದಿಸಿದರು.

error: