ಸಿರ್ಸಿ ; ತ್ಯಾಗಲಿ ಸೇವಾ ಸಹಕಾರಿ ಸಂಘದಲ್ಲಿ ಪೋಲಿಸ್ ಜನಸ್ನೇಹಿ ಸಭೆ ದಿನಾಂಕ 02-07-2022 ರಂದು ಸಿದ್ದಾಪುರ ತಾಲೂಕಿನ ತ್ಯಾಗಲಿ ಸೊಸೈಟಿಯ ಶತಸಂಪನ್ನ ಸಭಾಭವನದಲ್ಲಿ ಸಿದ್ದಾಪುರ ಪೊಲೀಸ್ ಠಾಣೆ ವತಿಯಿಂದ ಮಾಡಲಾಯಿತು,
ಸಭೆಯಲ್ಲಿ ಪೊಲೀಸ್ ಉಪನಿರೀಕ್ಷಕ ರಾದ ಮಾಂತಪ್ಪ ಕುಂಬಾರ್ ರವರು ಮಾತನಾಡಿ ಕಳ್ಳತನದ ಬಗ್ಗೆ ಹಾಗೂ ಸಿಸಿಟಿವಿ ಅಳವಡಿಸುವ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು ಸಿದ್ದಾಪುರ ಪೊಲೀಸ್ ನಿರೀಕ್ಷಕರಾದ ಕುಮಾರ್ ಕೆ ರವರು ಸಂಚಾರ ನಿಯಮಗಳ ಬಗ್ಗೆ ಅಡಿಕೆ ಕಳ್ಳತನದ ಬಗ್ಗೆ ಆನ್ಲೈನ್ ವಂಚನೆಯ ಸೈಬರ್ ಕ್ರೈಮ್ ಬಗ್ಗೆ ತಿಳಿಸಿದರು.
ಶಿರಸಿ ಉಪವಿಭಾಗದ ಡಿ. ಎಸ್ .ಪಿ. ರವಿ ಡಿ ನಾಯ್ಕ ರವರು ಮಾತನಾಡಿ ಪೊಲೀಸ್ ಠಾಣೆಗಳು ಜನಸ್ನೇಹಿ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಪೊಲೀಸ್ ಅಂದ್ರೆ ಭಯ ಹೋಗ್ಬೇಕು
ಪೊಲೀಸ್ ನಡೆ ಹಳ್ಳಿಕಡೆ, ಕೆಲವೊಂದು ಸಣ್ಣ ವಿಷಯಗಳನ್ನು ಸಣ್ಣದಿರುವುಗಲೇ ಬಗೆಹರಿಸಿ ಕೊಳ್ಳ ಬೇಕು ಮುಂದೆ ದೊಡ್ಡ ಸಮಸ್ಯೆ ಮಾಡಿಕೊಳ್ಳಬಾರದು ಬೀಟ್ ಕಮಿಟಿ ಯೂತ್ ಕಮಿಟಿ ಯವರೊಂದಿಗೆ ಮಾಹಿತಿ ಹಂಚಿಕೊಳ್ಳಿ ,ಸಾರ್ವಜನಿಕರು ಪೊಲೀಸ್ ರೊಂದಿಗೆ ಸಹಕರಿಸ್ಬೇಕು ಮೊಬೈಲ್ನಿಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಕೆವಹಿಸಿಲು ಹೇಳಿದರು. ಸಾರ್ವಜನಿಕರ ಸಮಸ್ಯಗಳಿಗೆ ಸ್ಥಳದಲ್ಲಿ ಪರಿಹಾರ ಹೇಳಿದರು, ನಮ್ಮ ಎರಿಯಾಕ್ಕೆ ಬರುವ ಎಲ್ಲಾ ಕಡೆ ಕ್ರೈಮ್ ಅನ್ನು ಹತೋಟಿಗೆ ತಂದಿದ್ದೇನೆ, ಕೆಲವು ಅಕ್ರಮ ಚಟುವಟಿಕೆಗಳನ್ನು ಹತೋಟಿಗೆ ತರುವುದಿದೆ , ಆಬಗ್ಗೆ ಕ್ರಮ ಕೈಗೋಳ್ಳುತ್ತೇನೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ತ್ಯಾಗಲಿ ಸೊಸೈಟಿ ಅಧ್ಯಕ್ಷ ರಾದ ಎನ್ ಬಿ ಹೆಗಡೆ ಮತ್ತೀಹಳ್ಳಿ ಅವರು ಮಾತನಾಡಿ ಕಾನೂನು ನಮ್ಮ ರಕ್ಷಣೆ ಮಾಡುತ್ತೆ ಕಳೆದ 8-10 ವರ್ಷ ಗಳಿಂದ ಇಲಾಖೆ ಬದಲಾವಣೆ ಆಗುತ್ತಿದೆ ಕರ್ನಾಟಕ ಪೊಲೀಸ್ ದೇಶದಲ್ಲಿ ಹೆಸರು ಮಾಡಿದೆ, ಕರೋನಾ ಸಂಧರ್ಬದಲ್ಲಿ ಪೋಲಿಸ್ ಇಲಾಖೆಯ ಕಾರ್ಯ ನೆನಪಿಡುವಂತಹದ್ದು, ಪೋಲಿಸ್ ಅಧಿಕಾರಿಗಳು ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ, ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ನುಡಿದರು.
ವೇದಿಕೆ ಮೇಲಿದ್ದಂತಹ ಪೋಲಿಸ್ ಅಧಿಕಾರಿಗಳಿಗೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸಭೆಯಲ್ಲಿ ಸುತ್ತಮುತ್ತಲಿನ ನೂರೈವತ್ತಕ್ಕೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪಿ ಎಸ್ ಐ ಮಲ್ಲಿಕಾರ್ಜುನ ಕೋರಾಣಿ. ಬೀಟ್ ಸಿಬ್ಬಂದಿಗಳಾದ ಕೃಷ್ಣ ನಾಯ್ಕ ಹಾಗೂ ಶ್ರೀಮತಿ ಸರಸ್ವತಿ ಗುಗ್ಗರಿ ಭಾಗವಹಿಸಿದ್ದರು.
ತ್ಯಾಗಲಿ ಸೇವಾ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಸುಧಾಕರ್ ಹೆಗಡೆ ನಿರೂಪಣೆ ಮಾಡಿದರು,ತ್ಯಾಗಲಿ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು, ಸೇವಾ ಸಹಕಾರಿ ಸಂಘದ ಸಿಬ್ಬಂದಿಗಳು, ಸಂಘದ ಸದಸ್ಯರು, ಸ್ವಸಹಾಯ ಸಂಘದವರು, ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ,ಹಿರಿಯರು,ಸಭೆಯಲ್ಲಿ ಹಾಜರಿದ್ದರು. ವಿ ಎಮ್ ಹೆಗಡೆ ತ್ಯಾಗಲಿ ಸ್ವಾಗತಿಸಿದರೇ, ಸಿದ್ದಾಪುರ ಪೋಲಿಸ್ ಠಾಣೆಯ ಉಪನೀರಿಕ್ಷಕರಾದ ಮಲ್ಲಿಕಾರ್ಜುನ ಕೊರಾಣಿಯವರು ವಂದಿಸಿದರು……..
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ