ಶಿರಸಿ: ಕಾಡಿನ ನಡುವಿನ ಹಳ್ಳಿಯಲ್ಲಿ ಇದ್ದು ಬ್ರಾಹ್ಮೀ ಮಾಲ್ಟ ಸಿದ್ದಗೊಳಿಸಿ ಪೇಟೆಯ ಮಾರುಕಟ್ಟೆಗೆ ಕಳಿಸುತ್ತಿದ್ದ ಘಟಕಕ್ಕೆ ಈಗ ಇನ್ನಷ್ಟು ಶಕ್ತಿ ಲಭಿಸಿದೆ. ಸೆಲ್ಕೋ ಸೋಲಾರ್ ಸಂಸ್ಥೆ ಈಗ ನೇರವಾಗಿ ಸೂರ್ಯನಿಗೇ ಪ್ಲಗ್ ಹಾಕಿಸಿ ಗ್ರಹೋದ್ಯಮಕ್ಕೆ ಪವರ್ ಕೊಟ್ಟಿದೆ.
ತಾಲೂಕಿನ ರಾಗಿಹೊಸಳ್ಳಿಯ ಹೊಸೂರಿನ ಗಂಗಾ ಸೀತಾರಾಮ್ ಹೆಗಡೆ ಅವರ ಬ್ರಾಹ್ಮಿ ಮಾಲ್ಟ್ ತಯಾರಿಸುವ ಘಟಕಕ್ಕೆ ಸೆಲ್ಕೋ ಸಂಸ್ಥೆ ವತಿಯಿಂದ ಹಿಟ್ಟಿನ ಗಿರಣಿ, ಸಿರಿಧಾನ್ಯ ಹುರಿಯುವ ಯಂತ್ರ, ಪ್ಯಾಕಿಂಗ್ ಯಂತ್ರ ಹಾಗೂ ಬಾಳೆಕಾಯಿ ಕತ್ತರಿಸುವ ಯಂತ್ರಕ್ಕೆ ಸೌರ ವಿದ್ಯುತ್ ಶಕ್ತಿಯನ್ನು ಅಳವಡಿಸಿ ಕರೆಂಟ್ ಇಲ್ಲದಾಗಲೂ ಸೂರ್ಯನ ಪವರ್ ಬೆಳಕಾಗಿಸುವ, ಶಕ್ತಿ ಯಾಗಿಸುವ ಕಾರ್ಯ ಮಾಡಲಿದೆ.
ಈ ನೂತನ ಸೋಲಾರ್ ಪವರ್ ಘಟಕದ ಉದ್ಘಾಟನೆಯನ್ನು ಸಂಸ್ಥೆಯ ಸೆಲ್ಕೋದ ಉಪ ಮಹಾ ಪ್ರಬಂಧಕ ಪ್ರಸನ್ನ ಹೆಗಡೆ ನೆರವೇರಿಸಿ, ಸುಮಾರು ನಾಲ್ಕು ಲಕ್ಷದ ಎಪ್ಪತ್ತು ಸಾವಿರ ವೆಚ್ಚದಲ್ಲಿ ಎಲ್ಲ ಯಂತ್ರಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸೌರಶಕ್ತಿಯ ಮೂಲಕ ಇಂಧನವನ್ನ ಒದಗಿಸಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಇಂತಹ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ವಿದ್ಯುತ್ ಶಕ್ತಿಯ ಅವಲಂಬನೆ ಇಲ್ಲದೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸೌರ ವಿದ್ಯುತ್ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸೆಲ್ಕೋ ದ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ್ ಭಾಗವತ್ ಮಾತನಾಡಿ, ಮಹಿಳೆಯರು ನಡೆಸುವ ಆರೋಗ್ಯ ವರ್ಧಕ ಬ್ರಾಹ್ಮೀ ಘಟಕದಲ್ಲಿನ ಕೆಲಸ ಸುಲಭಗೊಳಿಸಲು ಸೆಲ್ಕೋ ನೆರವಾದ್ದರ ಬಗ್ಗೆ ಖುಷಿ ಇದೆ.ಸಿರಿಧಾನ್ಯ ಆಹಾರ ತಯಾರಿಸುವ ಗ್ರಾಮೀಣ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ನವೀಕರಿಸಬಹುದಾದ ಇಂಧನವನ್ನು ಬಳಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಕಾರಿ ಎಂದರು.
ಸೆಲ್ಕೋ ಫೌಂಡೇಶನ್ ಅಧಿಕಾರಿ ವೀರೇಶ್, ವಲಯ ವ್ಯವಸ್ಥಾಪಕ ದತ್ತಾತ್ರೇಯ ಹೆಗಡೆ,
ಶಿರಸಿ ಶಾಖೆಯ ವ್ಯವಸ್ಥಾಪಕ ಸುಬ್ರಾಯ ಹೆಗಡೆ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ