May 2, 2024

Bhavana Tv

Its Your Channel

ನೂತನನಗರದಲ್ಲಿ ಮಳೆಗಾಳಿಗೆ ಮನೆಯ ಮೇಲ್ಛಾವಣಿ ಬಿದ್ದು ವ್ಯಕ್ತಿಗೆ ಗಾಯ

ಯಲ್ಲಾಪುರ:- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಮಹಾಬಲೇಶ್ವರ ಗಾಗು ನಾಯ್ಕ ನೂತನ ನಗರ (ಜಡ್ಡಿ) ಇವರ ವಾಸ್ತವ್ಯದ ಮನೆಯು ಸುರಿದ ಗಾಳಿ ಮಳೆಗೆ ಮನೆಯ ಗೊಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದು ಹಾನಿಯಾಗಿದೆ. ಅಂದಾಜು ೬೦,೦೦೦/- ಹಾನಿಯಾಗಿರುವದರ ಜೊತೆಗೆ ಮಹಾಬಲೇಶ್ವರ ಗಾಗು ನಾಯ್ಕ ಇವರ ತಲೆಗೆ ಹಾಗೂ ಕಾಲಿಗೆ ಪೆಟ್ಟು ಬಿದ್ದಿದೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಯಲ್ಲಾಪುರ ತಾಲೂಕಿನ ತಹಶೀಲ್ದಾರ ಕೃಷ್ಣ ಕಾಮ್ಕರ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.

error: