ಯಲ್ಲಾಪುರ; ಕೊರೊನಾದ ಕ್ಲಿಷ್ಟ ಸನ್ನಿವೇಶದಲ್ಲೂ ಸಾರ್ವಜನಿಕರಲ್ಲಿ ಜಾಗ್ರತಿ ಸಂದೇಶ ಮನೆಮನೆಗೆ ತಲುಪಿಸುವಲ್ಲಿ ಪತ್ರಿಕೆ ಹಾಗೂ ವಿತರಕರ ಪಾತ್ರ ಹಿರಿದಾಗಿದೆ. ಕೊರೊನಾ ವಾರಿಯರ್ಸ ಅಗಿ ಶ್ರಮಿಸಿದ್ದಾರೆ. ಇಂತಹ ತೆರೆಯ ಮರೆಯ ಸಾಧಕರನ್ನು ಗುರುತಿಸುವ ನೆಲೆಯಲ್ಲಿ ಅವರವ ಸಂಕಷ್ಟಕ್ಕೆ ಮಿಡಿಯುವ ಪ್ರಯತ್ನವಾಗಿ ಪತ್ರಿಕಾ ವಿತರಕರ ನೆರವಿಗೆ ಸಂಸ್ಥೆ ಮುಂದಾಗಿದೆ ಎಂದು ನೊಬಲ್ ಲೈಪ್ ಟ್ರಸ್ಟ ಉಮಚಗಿಯ ಮುಖ್ಯಸ್ಥೆ ವಿದ್ಯಾ ಹೆಗಡೆ ಹೇಳಿದರು.ನಮ್ಮ ಸಂಸ್ಥೆಯು ಗ್ರಾಮೀಣ ಪ್ರದೇಶದ ಅಭ್ಯುದಯ ಹಾಗೂ ಸಬಲಿಕರಣದ ಧ್ಯೇಯೋದ್ದೇಶದ ಹಿನ್ನೆಲೆಯಲ್ಲಿ ಸ್ಥಾಪನೆಗೊಂಡ ಸಂಸ್ಥೆಯಾಗಿದೆ, ಟ್ರಸ್ಟ್ ತನ್ನ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಅವರು ಪಟ್ಟಣದ ಲೋಕೊಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡುತ್ತಿದ್ದರು. ಪತ್ರಕರ್ತ ನಾಗರಾಜ ಮದ್ಗುಣಿ ಸ್ವಾಗತಿಸಿ ಪ್ರಸ್ತಾಪಿಸಿದರು, ಪತ್ರಕರ್ತ ನರಸಿಂಹ ಸಾತೋಡ್ಡಿ ವಂದಿಸಿದರು.
ವರದಿ:-ವೇಣುಗೋಪಾಲ ಮದ್ಗುಣಿ
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ