May 17, 2024

Bhavana Tv

Its Your Channel

ಕೇಂದ್ರ ಸರ್ಕಾರ ಹಾಲ್ ಮಾರ್ಕ್ ಮೇಲೆ ಎಚ್.ಯು.ಐ.ಡಿ ಅಳವಡಿಸುವ ನಿಯಮ ಹಿಂಪಡೆಯಲು ಆಗ್ರಹ

ಯಲ್ಲಾಪುರ: ಆಭರಣಗಳ ಮೇಲೆ ಹಾಲ್ ಮಾರ್ಕ್ ಅಡಿಯಲ್ಲಿ ಎಚ್.ಯು. ಐ.ಡಿ ಅಳವಡಿಸುವ ನಿಯಮವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ತಾಲೂಕು ಜ್ಯುವೆಲರಿ ವರ್ಕರ್ಸ್ ಆ್ಯಂಡ್ ಮರ್ಚಂಟ್ಸ್ ಅಸೋಸಿಯೇಷನ್ ವತಿಯಿಂದ ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಸಂಸ್ಥಾಪಕರು ಹಾಗೂ ಜಿಲ್ಲಾ ಸಮಿತಿ ಸದಸ್ಯ ಅರವಿಂದ ವೆರ್ಣೆಕರ ಮಾತನಾಡಿ, ಹಾಲ್ ಮಾರ್ಕ್ ಬಗ್ಗೆ ವಿರೋಧವಿಲ್ಲ. ಆದರೆ ಎಚ್.ಯು.ಐ.ಡಿ ಕಾಯ್ದೆಯ ಕುರಿತು ವಿರೋಧವಿದೆ. ಈ ನಿಯಮದಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿವೆ. ಗ್ರಾಹಕರ ಹಿತಾಸಕ್ತಿಗೆ ಈ ಕಾಯ್ದೆ ವಿರುದ್ಧವಾಗಿದೆ. ಇದನ್ನು ಜಾರಿಗೆ ತಂದಲ್ಲಿ ಆಭರಣ ಉದ್ಯಮಕ್ಕೆ ಭಾರಿ ಹಿನ್ನೆಡೆ ಉಂಟಾಗಲಿದೆ. ಈ ತಾಂತ್ರಿಕ ವ್ಯವಸ್ಥೆಯಿಂದ ಸಣ್ಣ ಆಭರಣ ವ್ಯಾಪಾರಸ್ಥರಿಗೆ ತೊಂದರೆಯಾಗಲಿದೆ. ಗ್ರಾಹಕರಿಗೆ ಗುಣಮಟ್ಟದ ಆಭರಣ ನೀಡಲು ಕಷ್ಟವಾಗಲಿದೆ, ಸಮಯಕ್ಕೆ ಸರಿಯಾಗಿ ಆಭರಣ ನೀಡಲು ಸಾಧ್ಯವಾಗುವುದಿಲ್ಲ. ಇಷ್ಟೇ ಅಲ್ಲದೇ ಇನ್ನೂ ಹಲವು ರೀತಿಯ ಸಮಸ್ಯೆಗಳು ಈ ನಿಯಮದಿಂದ ಉಂಟಾಗಲಿದೆ. ಈ ನಿಯಮವನ್ನು ಹಿಂದಕ್ಕೆ ಪಡೆಯುವ ಮೂಲಕ ಸಣ್ಣ ಮತ್ತು ಮಧ್ಯಮ ಆಭರಣ ವರ್ತಕರು ಹಾಗೂ ಅವರ ಅವಲಂಬಿತರ ಬದುಕನ್ನು ಉಳಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುರೇಶ ರೇವಣಕರ, ಉಪಾಧ್ಯಕ್ಷರಾದ ರಾಜೇಂದ್ರ ಶೇಟ, ರಾಮಕೃಷ್ಣ ಅಣ್ವೆಕರ, ಜಿಲ್ಲಾ ಸಮಿತಿ ಸದಸ್ಯರಾದ ಪರಶುರಾಮ ಕುರ್ಡೆಕರ, ಸದಸ್ಯರಾದ ಗಣಪತಿ ಶೇಟ, ಪ್ರಕಾಶ ಶೇಟ, ಗಿರೀಶ ರೇವಣಕರ, ಅಶೋಕ ಶೇಟ್, ಸುಬ್ರಾಯ ಶೇಟ ಮುಂತಾದವರಿದ್ದರು
ರದಿ: ವೇಣುಗೋಪಾಲ ಮದ್ಗುಣಿ

error: