ವರದಿ: ವೇಣುಗೋಪಾಲ ಮದ್ಗುಣಿ
ನಂದೋಳ್ಳಿ:- ಸಹ್ಯಾದ್ರಿ ಸಂಚಯದ ಆಶ್ರಯದಲ್ಲಿ ಯಲ್ಲಾಪುರ ಮತ್ತು ಜೊಯಿಡಾ ತಾಲೂಕಿನ ೪೦ ಕ್ಕೂ ಹೆಚ್ಚು ಶಾಲೆಗಳಲ್ಲಿ ಎರಡು ತಿಂಗಳುಗಳ ಕಾಲ ನಡೆಯುವ ವನ ಚೇತನ ಎಂಬ ನೂತನ ಕಾರ್ಯಕ್ರಮದ ಉದ್ಘಾಟನೆಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಂದೊಳ್ಳಿಯಲ್ಲಿ ಜರುಗಿತು. ನಂದೋಳ್ಳಿ ಪಂಚಾಯತ ಅಧ್ಯಕ್ಷರಾದ ನರಸಿಂಹ ಕೋಣೆಮನೆಯವರು ಹೂ ಗಿಡಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ವನ ಚೇತನ ಅನಾವರಣಗೊಳಿಸಿ ಇದಕ್ಕೆ ಬೆನ್ನೆಲುಬಾದ ವಾಸುದೇವ ಐತಾಳರವರನ್ನು ಅಭಿನಂದಿಸಿ, ಹಾಡಿಯ ಮಕ್ಕಳ ಬದುಕಿಗೆ ನೆರವಾಗುವ ರೀತಿ ತುಂಬಾ ಅನುಪಮವಾದದ್ದು .ಇಂಥ ಸದ್ಧರ್ಮ ಪಾಲಿಸುವವರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು. ಸಹ್ಯಾದ್ರಿ ಸಂಚಯದ ಸಂಘಟಕರಾದ ದಿನೇಶ ಹೊಳ್ಳ ಮತ್ತು ಅವರ ತಂಡ ಮಕ್ಕಳ ಕಲಿಕೆಗೆ ನೆರವಾಗುವ ಅನೇಕ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂತಸದಾಯಕ ವಾತಾವರಣವನ್ನು ಈಡಿ ಶಾಲೆಯಲ್ಲಿ ಸೃಷ್ಟಿಸಿದ್ದರು ಸಂಪನ್ಮೂಲ ವ್ಯಕ್ತಿಯಾಗಿ ಧಾರಿಣಿ ,ಅರವಿಂದ , ಮಮತಾ ಕೆ ಮುಂತಾದವರಿದ್ದರು.
ಈ ಸಂದರ್ಭದಲ್ಲಿ ಮಾಗೋಡ ಶಾಲೆಗೆ ಸಂವೇದ ವೀಕ್ಷಿಸಲು ದೂರದರ್ಶನವನ್ನು ವಾಸುದೇವ ಐತಾಳರವರು ಕೊಡುಗೆಯಾಗಿ ನೀಡಿ, ಇದು ಹಳ್ಳಿಯ ಮಕ್ಕಳ ಕಲಿಕೆಗೆ ನೆರವಾಗಲಿ ಎಂದು ಆಶಿಸಿದರು.ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಿನಾಯಕ ಭಟ್ಟ ಎಂ.ಎನ. ಭಟ್ಟ ,ಶಂಕರ ಭಟ್ಟ ವಿಶಾಲ, ಶಾಲಾ ಮುಖ್ಯೋಪಾಧ್ಯಾಯರಾದ ಭಾಸ್ಕರ ನಾಯ್ಕ,ಶಿಕ್ಷಕರಾದ ಇಂದಿರಾ ನಾಯಕ,ಪ್ರತಿಭಾ ಹೆಗಡೆ,ಅಮೀರ್ ಚವಾಣ್ ಮುಂತಾದವರು ಉಪಸ್ಥಿತರಿದ್ದರು
More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ